Ad imageAd image

ನಾಲ್ವರು ಕುಖ್ಯಾತ ಕಳ್ಳರ ಬಂಧನ

ಕಾರಿನ ಗಾಜು ಒಡೆದು ಕಳ್ಳತನ ಮಾಡುತ್ತಿದ್ದ ನಾಲ್ಕು ಕುಖ್ಯಾತ ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ.

Nagesh Talawar
ನಾಲ್ವರು ಕುಖ್ಯಾತ ಕಳ್ಳರ ಬಂಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕಾರಿನ ಗಾಜು ಒಡೆದು ಕಳ್ಳತನ(Theft) ಮಾಡುತ್ತಿದ್ದ ನಾಲ್ಕು ಕುಖ್ಯಾತ ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುಚಾನಾಪಳ್ಳಿ ಮೂಲದ ಮುತ್ತು ಮೂರ್ತಿ, ಸೆಂಥಿಲ್, ಮುರಳಿ, ಜಾನ್ ಬಂಧಿತರು. ಬಂಧಿತರಿಂದ(Arrest) 7 ಲ್ಯಾಪ್ ಟಾಪ್, 5.85 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಇಂದಿರಾ ನಗರ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಪ್ರತಿಷ್ಠಿತ ಬಡಾವಣೆಗಳಲ್ಲಿ ತಿರುಗುತ್ತಿದ್ದರು. ಕಾರಿನೊಳಗೆ ಇರುವ ವಸ್ತುಗಳನ್ನು ಗಮನಿಸುತ್ತಿದ್ದರು. ನಂತರ ರಬ್ಬರ್ ಬ್ಯಾಂಡ್, ಗೋಲಿ ಸಹಾಯದಿಂದ ಕಾರಿನ(Car) ಗ್ಲಾಸ್ ಒಡೆದು ವಸ್ತುಗಳನ್ನು ಕದ್ದು ಜಾನ್ ಎನ್ನುವನಿಗೆ ಮಾರಾಟ ಮಾಡುತ್ತಿದ್ದರು. ಸಿಲಿಕಾನ್ ಸಿಟಿಯ 8 ಕಡೆಗಳಲ್ಲಿ ಇವರ ತಮ್ಮ ಕೈ ಚಳಕ ತೋರಿಸಿರುವುದು ಕಂಡು ಬಂದಿದೆ. ಆಗಸ್ಟ್ 11 ರಂದು ಕಳ್ಳತನ ನಡೆಸಿದ್ದರು. ಮತ್ತೊಂದು ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.

WhatsApp Group Join Now
Telegram Group Join Now
Share This Article