Ad imageAd image

ಚಿಕ್ಕಮಗಳೂರು: ಬಸ್ ಪಲ್ಟಿ, ನಾಲ್ಕು ಜನರಿಗೆ ಗಂಭೀರ ಗಾಯ

Nagesh Talawar
ಚಿಕ್ಕಮಗಳೂರು: ಬಸ್ ಪಲ್ಟಿ, ನಾಲ್ಕು ಜನರಿಗೆ ಗಂಭೀರ ಗಾಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು: ಖಾಸಗಿ ಪ್ರವಾಸಿ ಬಸ್ಸೊಂದು ಪಲ್ಟಿಯಾದ ಘಟನೆ ಶನಿವಾರ ಮುಂಜಾನೆ 5.30ರ ಸುಮಾರಿಗೆ ಕಳಸ ಹತ್ತಿರದ ಕಂಚಿಗಾನೆ ತಿರುವಿನಲ್ಲಿ ಸಂಭವಿಸಿದೆ. ಬಸ್ಸಿನಲ್ಲಿದ್ದ 48 ಜನರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, 14 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಖಾಸಗಿ ಬಸ್ಸಿನ ಮೂಲಕ ಕುದುರೆಮುಖ ಚಾರಣ ಹೋಗಲು ಪ್ರವಾಸಿಗರು ತೆರಳುತ್ತಿದ್ದರು.

ಗಾಯಾಳುಗಳನ್ನು ಕಳಸ ಪಟ್ಟಣದ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸುದ್ದಿ ತಿಳಿದು ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿದರು.

WhatsApp Group Join Now
Telegram Group Join Now
Share This Article