ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ನಟ ಹಾಗೂ ಟಿವಿಕೆ ಪಕ್ಷದ ಸ್ಥಾಪಕ ವಿಜಯ್ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ರೋಡ್ ಶೋ ನಡೆಸಿದ್ದು, ಈ ವೇಳೆ ಆಡಳಿತರೂಢ ಡಿಎಂಕೆ ಪಕ್ಷ ಹಾಗೂ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲ. ಜನ ವಿರೋಧಿ ಸ್ಟಾಲಿನ್ ಸರ್ಕಾರ ಬೇಕಾ ಅಥವ ಜನರನ್ನು ಪ್ರೀತಿಸುವ ವಿಜಯ್ ನಿಮಗೆ ಬೇಕಾ ಎಂದು ಕೇಳಿದ್ದಾರೆ. ಟಿವಿಕೆ ಪಕ್ಷಕ್ಕೆ ಒಂದು ಅವಕಾಶ ಕೊಡಿ. ಈ ಚುನಾವಣೆಯಲ್ಲಿ ಸೀಟಿ ಚಿಹ್ನೆ ದೊಡ್ಡ ಕ್ರಾಂತಿಯಾಗಬೇಕು ಅಂತಾ ಹೇಳಿದ್ದಾರೆ. ಪೂರ್ವ ತಿರುಚಿರಾಪಳ್ಳಿ ಕ್ಷೇತ್ರದಿಂದಲೂ ವಿಜಯ್ ಸ್ಪರ್ಧಿಸಿದ್ದಾರೆ.




