ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಕಿತ್ತೂರು(Kittoru) ಪಟ್ಟಣ ಪಂಚಾಯ್ತಿಯ ಬಿಜೆಪಿ ಸದಸ್ಯ ಅಪಹರಣ ಪ್ರಕರಣ ಹಿನ್ನಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ(Election) ಹೈಕೋರ್ಟ್ ತಡೆ ನೀಡಿದೆ. ಧಾರವಾಡ ಪೀಠ ನಾಳೆ ನಡೆಯಬೇಕಿದ್ದ ಚುನಾವಣೆಗೆ ತಡೆ ನೀಡಿದೆ. ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅಪಹರಣವಾಗಿದೆ. ಹೀಗಾಗಿ ಬಿಜೆಪಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಇದೆ. ಒಟ್ಟು 18 ಸ್ಥಾನಗಳಿವೆ. ಬಿಜೆಪಿ(BJP) 9 ಸದಸ್ಯರಿದ್ದಾರೆ. ಕಾಂಗ್ರೆಸ್(Congress) 5, ಪಕ್ಷೇತರರು 4 ಸೇರಿ 9 ಸ್ಥಾನಗಳಾಗಿವೆ. ಬಹುಮತಕ್ಕೆ 10 ಸ್ಥಾನಗಳು ಬೇಕು. ಹೀಗಾಗಿ ಕಾಂಗ್ರೆಸ್ ತಮ್ಮ ಸದಸ್ಯನನ್ನು ಅಪಹರಿಸಿದೆ ಎಂದು ಬಿಜೆಪಿ ಆರೋಪಿಸಿದೆ. ತಮ್ಮ ಸದಸ್ಯನ ಪತ್ತೆಯಾಗುವ ತನಕ ಚುನಾವಣೆ ಮುಂದೂಡಬೇಕು ಎಂದು ಹೈಕೋರ್ಟ್(High Court) ಮೆಟ್ಟಿಲು ಏರಿದ್ದರು. ಅದರಂತೆ ಕೋರ್ಟ್ ತಡೆ ನೀಡಿದೆ.