Ad imageAd image

ಹನಿಟ್ರ್ಯಾಪ್ ಪ್ರಕರಣ: ವಿಚಾರಣೆ ಶುರು ಮಾಡಿದ ಸಿಐಡಿ

Nagesh Talawar
ಹನಿಟ್ರ್ಯಾಪ್ ಪ್ರಕರಣ: ವಿಚಾರಣೆ ಶುರು ಮಾಡಿದ ಸಿಐಡಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ಸಚಿವ ಕೆ.ಎನ್ ರಾಜಣ್ಣ ಹಾಗೂ ಅವರ ಮಗನನ್ನು ಹನಿಟ್ರ್ಯಾಪ್ ಗೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಗೆ ವಿಚಾರಣೆ ಶುರು ಮಾಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಚನೆ ನೀಡಿದ ಮೇರೆಗೆ ಸಿಐಡಿ ವಿಚಾರಣೆ ಶುರು ಮಾಡಿದೆ. ಸಿಐಡಿ ಐಜಿಪಿ ವಂಶಿಕೃಷ್ಣ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.

ತಮ್ಮನ್ನು ಹನಿಟ್ರ್ಯಾಪ್ ಗೆ ಕೆಡವಲು ಯತ್ನಿಸಿದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಚಿವ ಕೆ.ಎನ್ ರಾಜಣ್ಣ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಗೃಹ ಸಚಿವರು ಪತ್ರವನ್ನು ರವಾನೆ ಮಾಡಿದರು. ಅಲ್ಲಿಂದ ಸಿಐಡಿ ಐಜಿಪಿ ಎಂ.ಎ ಸಲೀಂ ಅವರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಎರಡು ಸ್ಥಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

WhatsApp Group Join Now
Telegram Group Join Now
Share This Article