ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಬಂಡಾಯ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಪ್ರತಾಪ್(pratap simha) ಸಿಂಹ ಈ ಬಗ್ಗೆ ಮಾತನಾಡಿದ್ದು, ಅದು ಬಂಡಾಯ ಅಥವ ಅತೃಪ್ತರ ಸಭೆಯಲ್ಲ. ವಾಲ್ಮೀಕಿ(Valmiki) ನಿಗಮದ ಹಗರಣ ಖಂಡಿಸಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಸರಿಯಾಗಿ ಹೋರಾಟ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡುತ್ತೆ ಎಂದರು.
ಯತ್ನಾಳಂತಹ(Yatnal) ದೊಡ್ಡ ನಾಯಕರು ಕರೆದಿದ್ದು. ಹೀಗಾಗಿ ಅಲ್ಲಿ ಹೋಗಿದ್ದೆ. ಮೈಸೂರು ಪಾದಯಾತ್ರೆಯ ಅನುಭವ ಹಂಚಿಕೊಂಡಿದ್ದೇನೆ. ಇದು ಯಾರ ಮೇಲಾಟದ ಪಾದಯಾತ್ರೆ ಅಲ್ಲ. ಸೆಪ್ಟೆಂಬರ್ 17ರಿಂದ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಎಲ್ಲರನ್ನು ಆಹ್ವಾನಿಸಲಾಗುತ್ತೆ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಕೇಂದ್ರಕ್ಕೆ ಹೋಗಬೇಡಿ ಎಂದು ವರಿಷ್ಠರಿಂದ ಸಂದೇಶ ಬಂದಿದೆ. ಹೀಗಾಗಿ ಇಲ್ಲಿಯೇ ಇದ್ದೇನೆ. ನಾನು ಅನ್ಯಾಯದ ವಿರುದ್ಧ ಮಾತ್ರ ರೆಬಲ್. ಪಕ್ಷದ ವಿರುದ್ಧ ಇಲ್ಲ ಎಂದು ಹೇಳಿದರು.