ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್(Golden Star Ganesh) ಗಣೇಶ್ ನಟನೆಯ ಕೃಷ್ಣಂ ಪ್ರಣಯ(krishnam pranaya sakhi) ಸಖಿ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಹಾಡುಗಳು ಸೂಪರ್ ಹಿಟ್ ಆಗಿದ್ದು, ಎಲ್ಲೆಡೆ ದ್ವಾಪರ ಹಾಡು ಕೇಳಿ ಬರುತ್ತಿದೆ. ರೀಲ್ಸ್ ನಲ್ಲಿ ಹುಚ್ಚು ಹಿಡಿಸಲಾಗುತ್ತಿದೆ. ಇದನ್ನು ಬರೆದವರು ಚಿತ್ರ ಸಾಹಿತಿ ವಿ.ನಾಗೇಂದ್ರ(v nagendra prasad) ಪ್ರಸಾದ್ ಅವರು. ಈ ವಿಚಾರವಾಗಿ ರೊಚ್ಚಿಗೆದ್ದಿದ್ದು ಕೇಸ್ ಹಾಕ್ತೀನಿ ಎಂದಿದ್ದಾರೆ.
ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ಅವರು ಎಲ್ಲೆಡೆ ಎಫ್ಎಂ(FM) ಇರಬಹುದು, ಕಾರ್ಯಕ್ರಮ ಇರಬಹುದು, ಟಿವಿಗಳಲ್ಲಿರಬಹುದು. ನಟ ಹಾಗೂ ಗಾಯಕರ ಹೆಸರು ಮಾತ್ರ ಹೇಳುತ್ತಾರೆ. ಹಾಡು ಬರೆದವರ ಹೆಸರು, ಸಂಗೀತ ಸಂಯೋಜನೆ ಮಾಡಿದವರ ಹೆಸರು ಹೇಳಲ್ಲ. ನಾನು ಇದುವರೆಗೂ 3 ಸಾವಿರ ಹಾಡುಗಳನ್ನು ಬರೆದಿದ್ದೇನೆ. ನಾನು ಎಲ್ಲರಿಗೂ ಆಗ್ರಹಿಸುತ್ತಿದ್ದೇನೆ. ನಟರು ದೃಶ್ಯದ ಮೂಲಕ, ಗಾಯಕರು ಧ್ವನಿಯ ಮೂಲಕ ಎಲ್ಲರಿಗೂ ಗೊತ್ತಾಗುತ್ತಾರೆ. ಸಾಹಿತ್ಯ ಬರೆದವರು, ಸಂಗೀತ ನೀಡಿದವರು ಬಗ್ಗೆ ಗೊತ್ತಾಗಲ್ಲ. ಹೀಗಾಗಿ ಇನ್ಮುಂದೆ ಎಲ್ಲರೂ ಸಾಹಿತ್ಯ, ಸಂಗೀತ ನೀಡಿದವರ ಹೆಸರು ಹೇಳಬೇಕು. ಇಲ್ಲದಿದ್ದರೆ ಕೇಸ್ ಹಾಕುತ್ತೇವೆ ಎನ್ನುವ ಮೂಲಕ ತಮಗೆ ಸಿಗಬೇಕಿರುವ ಕ್ರೆಡಿಟ್ ನೀಡಬೇಕು ಎನ್ನುತ್ತಿದ್ದಾರೆ.