Ad imageAd image

ಸಂಜೆಯೊಳಗೆ ಮಸಣವಾದ ಮದುವೆ ಮನೆ

ಮುಂಜಾನೆ ಮದುವೆ ಮನೆಯಾಗಿದ್ದ ಸಂಜೆಯಾಗುತ್ತಲೇ ಮಸಣವಾಗಿದೆ. ಗಂಡ, ಹೆಂಡತಿಯಾಗಿ ಒಂದು ದಿನವೂ ಆಗಿಲ್ಲ ಆಗಲೇ ಕಿತ್ತಾಡಿಕೊಂಡು ವಧು ಕೊಲೆಯಾದರೆ,

Nagesh Talawar
ಸಂಜೆಯೊಳಗೆ ಮಸಣವಾದ ಮದುವೆ ಮನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೋಲಾರ(Kolara): ಮುಂಜಾನೆ ಮದುವೆ(Marraige) ಮನೆಯಾಗಿದ್ದ ಸಂಜೆಯಾಗುತ್ತಲೇ ಮಸಣವಾಗಿದೆ. ಗಂಡ, ಹೆಂಡತಿಯಾಗಿ ಒಂದು ದಿನವೂ ಆಗಿಲ್ಲ ಆಗಲೇ ಕಿತ್ತಾಡಿಕೊಂಡು ವಧು(Murder) ಕೊಲೆಯಾದರೆ, ವರನ ಸ್ಥಿತಿ ಗಂಭೀರವಾಗಿದೆ. ಇಂತಹದೊಂದು ಹೃದಯವಿದ್ರಾವಕ ಘಟನೆ ಕೆಜಿಎಫ್ ನಲ್ಲಿ ನಡೆದಿದೆ. ಲಿಖಿತಾಶ್ರೀ(20) ಕೊಲೆಯಾದವಳು. ನವೀನ್ ಕುಮಾರ್(27) ಗಂಭೀರವಾಗಿ ಗಾಯಗೊಂಡವನು.

ಆಂಧ್ರದ ಸಂತೂರ ಗ್ರಾಮದ ನವೀನ್ ಕುಮಾರ್ ಹಾಗೂ ಬೈನೇಹಳ್ಳಿಯ ಲಿಖಿತಾಶ್ರೀ ಜೊತೆಗೆ ಮದುವೆ ನಿಶ್ಚಿಯವಾಗಿದೆ. ಹುಡುಗಿಯ ಕಡೆಯವರು ಮದುವೆಯನ್ನು ಕಲ್ಯಾಣ ಮಂಟಪದಲ್ಲಿ ಭರ್ಜರಿಯಾಗಿ ಮಾಡಿ ಎಂದು ಹುಡುಗನ ಮನೆಯವರ ಕಡೆ ಕೇಳಿಕೊಂಡಿದ್ದಾರೆ. ದುಂದುವೆಚ್ಚ ಬೇಡ ಮನೆಯಲ್ಲಿಯೇ ಮದುವೆ ಮಾಡೋಣವೆಂದು ಅವರು ಹೇಳಿದ್ದಾರೆ. ಹೀಗಾಗಿ ಕೆಜಿಎಫ್(KGF) ಹೊರವಲಯದ ಚಂಬರಸನಹಳ್ಳಿಯಲ್ಲಿರುವ ವರನ ಅಕ್ಕನ ಮನೆಯಲ್ಲಿ ಬುಧವಾರ ಮುಂಜಾನೆ ಮದುವೆಯಾಗಿದೆ.

ನವ ಜೋಡಿ ಸಂಜೆ ಸಂಬಂಧಿಕರ ಮನೆಗೆ ಚಾ ಕುಡಿಯಲು ಹೋಗಿದೆ. ಅವರು ಚಾ ಕೊಟ್ಟು ಹೊರಗೆ ಹೋಗುತ್ತಲೇ ಮನೆಯ ಬಾಗಿಲು ಹಾಕಿಕೊಂಡು ಕಿತ್ತಾಡಿಕೊಂಡಿದ್ದಾರೆ. ಇವರ ಕೀರಾಚಾಟ ಕೇಳಿ ಸಂಬಂಧಿಕರು ಓಡಿ ಬಂದಿದ್ದಾರೆ. ಬಾಗಿಲು ಹಾಕಿದ್ದರಿಂದ ಕಿಟಕಿಯಿಂದ ನೋಡಿದರೆ ವಧು ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ವರ ಮಚ್ಚಿನಿಂದ ಕತ್ತು ಕೊಯ್ದುಕೊಳ್ಳುತ್ತಿದ್ದ. ಬಾಗಿಲು ಮುರಿದು ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ವಧು ಮೃತಪಟ್ಟಿದ್ದಾಳೆ. ವರನ ಸ್ಥಿತಿ ಗಂಭೀರವಾಗಿದೆ. ಈ ದುರಂತಕ್ಕೆ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ.

WhatsApp Group Join Now
Telegram Group Join Now
Share This Article