Ad imageAd image

ಧಾರವಾಡ: ನವಯಾನ ಲಾ ಕಚೇರಿ ಉದ್ಘಾಟನೆ

Nagesh Talawar
ಧಾರವಾಡ: ನವಯಾನ ಲಾ ಕಚೇರಿ ಉದ್ಘಾಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಧಾರವಾಡ(Dharwad): ಹೈಕೋರ್ಟ್‌ನ ವಕೀಲರಾದ ಶ್ರೀಧರ ಪ್ರಭು ಅವರ ‘ನವಯಾನ ಲಾ’ ಎನ್ನುವ ನೂತನ ಕಚೇರಿಯನ್ನು ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯರಾದ ಡಾ.ಮನಮೋಹನ ಜೀ ವೈದ್ಯ ಅವರು ಉದ್ಘಾಟಿಸಿದರು. ನಗರದ ಕೆಲಗೇರಿ ರಸ್ತೆಯ ಕೆನರಾ ಬ್ಯಾಂಕ್ ಕಾಲೊನಿಯ ಅರಿಹಂತ ಕಟ್ಟಡದ 1ನೇ ಮಹಡಿಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಕಚೇರಿಯ ಉದ್ಘಾಟನೆ ಜರುಗಿತು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹುಬ್ಬಳ್ಳಿಯ ಸ್ಮಶಾನ ನೌಕರರಾದ ಎನ್.ದೇವದಾನಂ ಹಾಗೂ ಅವರು ಕುಟುಂಬ ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ವಕೀಲರಾದ ಶ್ರೀಧರ ಪ್ರಭು ಅವರು ಮನಮೋಹನ ಜೀ ವೈದ್ಯ, ಎನ್.ದೇವದಾನಂ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ಶ್ರೀಧರ ಪ್ರಭು ಅವರು ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಭೇಂಡೆ, ಕರ್ನಾಟಕ ಉತ್ತರ ಪ್ರಾಂತದ ಪ್ರಚಾರಕ ನರೇಂದ್ರ, ವಕೀಲರಾದ ಮಂಗಲಾ ಪ್ರಭು, ಗೀತಾಂಜಲಿ ಕಾಮತ್, ಸುರೇಶ ಪರಾಂಡೆ, ಅಜಯ್ ಜಾನಕೂನವರ ಸೇರಿದಂತೆ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯದ ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article