Ad imageAd image

ಇನ್ಮುಂದೆ ಉಗ್ರರ ದಾಳಿ ಯುದ್ಧಕ್ಕೆ ಸಮ: ಭಾರತ

Nagesh Talawar
ಇನ್ಮುಂದೆ ಉಗ್ರರ ದಾಳಿ ಯುದ್ಧಕ್ಕೆ ಸಮ: ಭಾರತ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದು ಹಾಗೂ ಇವರಿಗೆ ಬೆಂಬಲ ನೀಡುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ, ಭವಿಷ್ಯದಲ್ಲಿ ನಡೆಯುವ ಭಯೋತ್ಪಾದಕ ದಾಳಿಯನ್ನು ಯುದ್ದಕ್ಕೆ ಸಮ ಎಂದು ಭಾರತ ಹೇಳಿದೆ ಅಂತಾ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಉಗ್ರರ ಕೃತ್ಯಕ್ಕೆ ಇನ್ಮುಂದೆ ಸರಿಯಾದ ಉತ್ತರ ನೀಡುವ ಕೆಲಸವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಲಾಗಿದೆ.

ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 22 ಜನರು ಮೃತಪಟ್ಟಿದ್ದರು. ಹೀಗಾಗಿ ಭಾರತ ಆಪರೇಷನ್ ಸಿಂಧೂರ ಮೂಲಕ ಉಗ್ರರ 9 ಶಿಬಿರಗಳನ್ನು ಉಡೀಸ್ ಮಾಡಿತು. ನಂತರ ಎರಡು ದೇಶಗಳ ನಡುವೆ ಯುದ್ಧ ವಾತಾವರಣ ಮೂಡಿತು. ಎರಡೂ ಕಡೆಯಿಂದ ವೈಮಾನಿಕ, ಡ್ರೋನ್ ದಾಳಿ ನಡೆದಿದ್ದು, ಪಾಕಿಸ್ತಾನದ ಎಲ್ಲ ಕೃತ್ಯಗಳನ್ನು ಭಾರತೀಯ ಸೇನಾ ಪಡೆ ವಿಫಲಗೊಳಿಸಿ, ಎಲ್ಲವನ್ನು ಧ್ವಂಸಗೊಳಿಸಿದೆ.

WhatsApp Group Join Now
Telegram Group Join Now
Share This Article