Ad imageAd image

ಮನಮೋಹನ್ ಸಿಂಗ್ ಗೆ ಭಾರತರತ್ನ ನೀಡಲು ತೆಲಂಗಾಣದಲ್ಲಿ ಒತ್ತಾಯ

Nagesh Talawar
ಮನಮೋಹನ್ ಸಿಂಗ್ ಗೆ ಭಾರತರತ್ನ ನೀಡಲು ತೆಲಂಗಾಣದಲ್ಲಿ ಒತ್ತಾಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೈದರಾಬಾದ್(Hyderabad): ಇದೇ ಡಿಸೆಂಬರ್ 26ರ ತಡರಾತ್ರಿ ನಿಧನ ಹೊಂದಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ತೆಲಂಗಾಣ ವಿಧಾನಸಭೆಯಲ್ಲಿ ನಿರ್ಣಯಕ್ಕೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ಸೋಮುವಾರ ನಡೆದ ಕಾಲಪದಲ್ಲಿ ಎಲ್ಲರ ಒಪ್ಪಿಗೆ ನೀಡಿದ್ದಾರೆ.

ಕಲಾಪ ಆರಂಭದಲ್ಲಿ ಅವರಿಗೆ ಸಂತಾಪ ಸೂಚಿಸುವ ಹಾಗೂ 2014ರಲ್ಲಿ ತೆಲಂಗಾಣ ಸ್ಥಾಪನೆಯಾಗುವಲ್ಲಿ ಅವರ ವಹಿಸಿದ ಪಾತ್ರಕ್ಕೆ ಕೃತಜ್ಞತೆ ಸಲ್ಲಿಸುವ ನಿಲುವಳಿಯನ್ನು ಮುಖ್ಯಮಂತ್ರಿ ರೇವಂತಿ ರೆಡ್ಡಿ ಪ್ರಸ್ತಾಪಿಸಿದರು. ಮೊದಲಿಗೆ 2 ನಿಮಿಷ ಮೌನಾಚರಣೆ ಮಾಡಲಾಯಿತು. ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎನ್ನುವ ನಿರ್ಣಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.

WhatsApp Group Join Now
Telegram Group Join Now
Share This Article