ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಒಂದು ಕಡೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿಯಲ್ಲಿಯೇ ಕೆಲವು ನಾಯಕರು ಬಂಡಾಯವೆದಿದ್ದಾರೆ. ಹೀಗಾಗಿಯೇ ಇವರು ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಲಿಲ್ಲ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ(BSY), ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಹೈಕಮಾಂಡ್ ಗೆ ದೂರು ಸಲ್ಲಿಸಲು ಸಜ್ಜಾಗಿದ್ದಾರೆ. ಹೀಗಾಗಿ ಭಾನುವಾರ ತಾಲೂಕಿನ ಕಿಣಯೇ ಗ್ರಾಮದ ಹತ್ತಿರದ ರೆಸಾರ್ಟ್ ನಲ್ಲಿ ಸಭೆ ನಡೆಸಿದರು.
ಸಭೆ ಮುಗಿದ ಬಳಿಕ ಹೊರ ಬಂದ ಕೆಲ ನಾಯಕರು ಇದು ಪಕ್ಷದ ಭಿನ್ನಮತ ಚಟುವಟಿಕೆಯಲ್ಲ ಎಂದರೆ, ಯಾರೋ ಒಬ್ಬರನ್ನು ಹೀರೋ ಮಾಡಲು ಮಾಡುತ್ತಿರುವ ಹೋರಾಟವಲ್ಲ ಎಂದು ಯತ್ನಾಳ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ಟರು. ಮುಡಾ(MUDA), ವಾಲ್ಮೀಕಿ(Valmiki) ನಿಗಮದ ಹಗರಣದ ಪಾದಯಾತ್ರೆ ಮೈಸೂರಿಗೆ ಸೀಮಿತವಾದದ್ದು, ನಮ್ಮ ಹೋರಾಟ ರಾಜ್ಯಕ್ಕೆ ಸಂಬಂಧಿಸಿದ್ದು, ಹೀಗಾಗಿ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಯೋಚನೆ ಇದೆ ಎಂದರು.
ಶಾಸಕರಾದ ಬಸವನಗೌಟ ಪಾಟೀಲ(Yatnal) ಯತ್ನಾಳ, ರಮೇಶ(Jarakiholi) ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ್ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದರಾದ ಪ್ರತಾಪ್(Pratp simha) ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಜಿ.ಎಂ ಸಿದ್ದೇಶ್ವರ್ ಸೇರಿ ಇತರರು ಈ ವೇಳೆ ಭಾಗವಹಿಸಿದ್ದರು.