Ad imageAd image

ಸರ್ಕಾರ ಅಸ್ತಿರಗೊಳಿಸಲು 100 ಕೋಟಿ ಆಫರ್: ಗಣಿಗ ರವಿಕುಮಾರ್

ರಾಜ್ಯ ಸರ್ಕಾರವನ್ನು ಕಾಂಅಸ್ತಿರಗೊಳಿಸಲು ಗ್ರೆಸ್ ನ 50 ಮಂದಿ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಕುಮಾರ್

Nagesh Talawar
ಸರ್ಕಾರ ಅಸ್ತಿರಗೊಳಿಸಲು 100 ಕೋಟಿ ಆಫರ್: ಗಣಿಗ ರವಿಕುಮಾರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandaya): ರಾಜ್ಯ ಸರ್ಕಾರವನ್ನು ಕಾಂಅಸ್ತಿರಗೊಳಿಸಲು ಗ್ರೆಸ್ ನ 50 ಮಂದಿ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಕುಮಾರ್ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ಜೆಡಿಎಸ್ ನ ಹೆಚ್.ಡಿ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಬಿಜೆಪಿಯ ಬ್ರೋಕರ್ ಗಳು ನಿತ್ಯ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ನನ್ನನ್ನು ಸಹ ದೂರವಾಣಿ ಮೂಲಕ ಸಂಪರ್ಕಿಸಿದ್ದರು. ನಮ್ಮ ಶಾಸಕರು ಬಲಿಯಾಗಲ್ಲ. ಈ ಬಗ್ಗೆ ಸಾಕ್ಷಿ ಸಂಗ್ರಹಿಸಿದ್ದು ಇಡಿ ಅಧಿಕಾರಿಗಳಿಗೆ ಕೊಡುತ್ತೇವೆ. ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿಯಾಗಿದೆ. ಬಿಜೆಪಿಯ ತಂತ್ರಕ್ಕೆ ಕಾಂಗ್ರೆಸ್ ರಣತಂತ್ರ ಮಾಡುತ್ತದೆ. ಬೀದಿಯಲ್ಲಿ ಹೋಗುವವರು ಪ್ರಾಸಿಕ್ಯೂಷನ್ ಕೊಡಿ ಅಂದರೆ ಕೊಡುವುದಲ್ಲ. 17ಬಿ ಪ್ರಕಾರಣ ತನಿಖಾಧಿಕಾರಿಗಳು ಕೇಳಿದರೆ ಮಾತ್ರ ಕೊಡಬೇಕು. ಆದರೆ, ಇಲ್ಲಿ ರಾಜ್ಯಪಾಲರು ಬಿಜೆಪಿ ಏಜೆಂಟರ ರೀತಿ ಕೆಲಸ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
Share This Article