Ad imageAd image

2-3 ಬಾರಿ ಶಾಸಕರಾದವರು ಸಚಿವರಾಗಲು ಸಮರ್ಥರು: ಸಚಿವ ಜಿ.ಪರಮೇಶ್ವರ್

Nagesh Talawar
2-3 ಬಾರಿ ಶಾಸಕರಾದವರು ಸಚಿವರಾಗಲು ಸಮರ್ಥರು: ಸಚಿವ ಜಿ.ಪರಮೇಶ್ವರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಂಪುಟ ಪುನರ್ ರಚನೆ ಬಗ್ಗೆ ಹೈಕಮಾಂಡ್, ಮುಖ್ಯಮಂತ್ರಿ ಅವರು ನಿರ್ಧರಿಸುತ್ತಾರೆ. 2 ರಿಂದ 3 ಬಾರಿ ಶಾಸಕರಾದವರು ಸಚಿವರಾಗಲು ಸಮರ್ಥರು. ಹೀಗಾಗಿ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಇದನ್ನು ಗ್ಯಾಂಬ್ಲಿಂಗ್ ಎನ್ನಲು ಆಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಈಗ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ. ನಾಯಕತ್ವ ಬದಲಾವಣೆ ಸೇರಿ ಎಲ್ಲವೂ ಹೈಕಮಾಂಡ್ ಮಾಡಬೇಕು. ಅನೇಕರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು, ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್ ಎಲ್ಲರೂ ಹಿರಿಯರಿದ್ದೇವೆ. ನಮ್ಮನ್ನು ಬದಲಾಯಿಸಬೇಕು ಎಂದು ತೀರ್ಮಾನಿಸಿದರೆ ನಮಗೆ ಪ್ರಶ್ನಿಸಲು ಬರುವುದಿಲ್ಲ ಅಂತಾ ಹೇಳಿದರು.

WhatsApp Group Join Now
Telegram Group Join Now
Share This Article