Ad imageAd image

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಸದ ಜಿಗಜಿಣಗಿ ಚಾಲನೆ

ಬಿಜೆಪಿ ಕಾರ್ಯಾಲಯದಲ್ಲಿ ನಾಗಠಾಣ ಮಂಡಲದ ಬಿಜೆಪಿ ಸದಸ್ಯತಾ ಅಭಿಯಾನ 2024ರ ಕಾರ್ಯಾಗಾರವನ್ನು ಸಂಸದ ರಮೇಶ ಜಿಗಜಿಣಗಿ ಅವರು ಉದ್ಘಾಟಿಸಿದರು.

Nagesh Talawar
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಸದ ಜಿಗಜಿಣಗಿ ಚಾಲನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಬಿಜೆಪಿ ಕಾರ್ಯಾಲಯದಲ್ಲಿ ನಾಗಠಾಣ ಮಂಡಲದ ಬಿಜೆಪಿ ಸದಸ್ಯತಾ(BJP Membership Campaign) ಅಭಿಯಾನ 2024ರ ಕಾರ್ಯಾಗಾರವನ್ನು ಸಂಸದ ರಮೇಶ ಜಿಗಜಿಣಗಿ ಅವರು ಉದ್ಘಾಟಿಸಿದರು. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದೇನೆ. ಆದ್ದರಿಂದ ನಾನು ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತಂದಿದ್ದು, ರಾಷ್ಟ್ರೀಯ ಹೆದ್ದಾರಿಗಳು, ವಿಮಾನ(Air port) ನಿಲ್ದಾಣವನ್ನು ಮಂಜೂರು ಮಾಡಿಸಿದ್ದು ಈ ಕಾಮಗಾರಿಗಳೆಲ್ಲ ಮುಗಿಯುವ ಹಂತಕ್ಕೆ ಬಂದಿವೆ. 2024ರ ಬಿಜೆಪಿ ಸದಸ್ಯರನ್ನು ಮಾಡಲು ಈ ಅಭಿಯಾನದಲ್ಲಿ ಪಾಲ್ಗೊಂಡು ನಾಗಠಾಣ ಮಂಡಲದಿಂದ ಕೊಟ್ಟ ಟಾರ್ಗೆಟ್ ಗಿಂತ ಹೆಚ್ಚಿಗೆ ಮಾಡಲು ಸದಸ್ಯತಾ ಅಭಿಯಾನದಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲುಗೌಡ ಪಾಟೀಲ ಮಾತನಾಡಿ, ಸದಸ್ಯತಾ ಅಭಿಯಾನನಲ್ಲಿ ಎಲ್ಲ ಪದಾಧಿಕಾರಿಗಳು ತಮ್ಮ ಜೊತೆಗೆ ಐದು ಜನರ ತಂಡ ಮಾಡಿ ಪ್ರತಿ ಮನೆಗಳಿಗೆ ಭೇಟಿ ಕೊಟ್ಟು ಅವರ ಮೊಬೈಲ್ ನಿಂದ ಮಿಸ್ ಕಾಲ್ ಕೊಟ್ಟು ಅವರ ಸಂಪೂರ್ಣ ಮಾಹಿತಿಯನ್ನು ಆನ್ ಲೈನ್ನಲ್ಲಿ ಅಪ್ಲೋಡ್ ಮಾಡಿಸುವುದು ನಿಮ್ಮ ನಮ್ಮೆಲ್ಲರ ಜವಾಬ್ದಾರಿ ಎಂದರು. ಈ ವೇಳೆ ಮಂಡಲ ಸಂಚಾಲಕ ಚಿದಾನಂದ ಚಲವಾದಿ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ  ನಾಯಕ, ನವೀನ ಅರಿಕೇರಿ, ಸಮೀರ ಕುಲಕರ್ಣಿ, ಶರತ ಸಿಂಗ್ ರಜಪೂತ್, ಸಿದ್ದು ದಸ್ತರಡ್ಡಿ,  ಮಂಡಲ, ಮೋರ್ಚಾ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ, ಬೂತ್ ಅಧ್ಯಕ್ಷರು  ಎಲ್ಲ ಪದಾಧಿಕಾರಿಗಳು, ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ಸಿದಗೊಂಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

WhatsApp Group Join Now
Telegram Group Join Now
Share This Article