Ad imageAd image

ವಿಜಯಪುರ ಸೇರಿ 4 ರೈಲು ನಿಲ್ದಾಣಗಳಿಗೆ ಸ್ವಾಮೀಜಿಗಳ ಹೆಸರು ಶಿಫಾರಸು

Nagesh Talawar
ವಿಜಯಪುರ ಸೇರಿ 4 ರೈಲು ನಿಲ್ದಾಣಗಳಿಗೆ ಸ್ವಾಮೀಜಿಗಳ ಹೆಸರು ಶಿಫಾರಸು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ವಿಜಯಪುರ, ಬೆಳಗಾವಿ, ಬೀದರ, ಶಿವಮೊಗ್ಗ ರೈಲು ನಿಲ್ದಾಣಗಳಿಗೆ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಲು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ವಿಜಯಪುರ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ರೈಲು ನಿಲ್ದಾಣ ಎಂದು ನಾಮಕರಣ ಮಾಡಲು ಪ್ರಸ್ತಾಪ ಸಲ್ಲಿಸಿದ್ದಾರೆ.

ಇನ್ನು ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ ನಿಲ್ದಾಣಕ್ಕೆ ಚನ್ನಬಸವ ಪಟ್ಟದೇವರು ಹಾಗೂ ಶಿವಮೊಗ್ಗದ ಸರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ ಎಂದು ನೂತನ ಹೆಸರು ಇಡಲು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

WhatsApp Group Join Now
Telegram Group Join Now
Share This Article