Ad imageAd image

ಚಿನ್ನಾಭರಣ ವಂಚನೆ ಪ್ರಕರಣ: ಡಿ.ಕೆ ಸುರೇಶಗೆ ನೋಟಿಸ್

Nagesh Talawar
ಚಿನ್ನಾಭರಣ ವಂಚನೆ ಪ್ರಕರಣ: ಡಿ.ಕೆ ಸುರೇಶಗೆ ನೋಟಿಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಐಶ್ವರ್ಯಗೌಡ ಅನ್ನೋ ಮಹಿಳೆ 9.82 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಪ್ರಕರಣ ಸಂಬಂಧ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸ್ವತಃ ಡಿ.ಕೆ ಸುರೇಶ ನೋಟಿಸ್ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿ.ಕೆ ಸುರೇಶ ಹೇಳಿಕೊಂಡು ಐಶ್ವರ್ಯಗೌಡ ಚಿನ್ನದ ವ್ಯಾಪಾರಿಗಳಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪಡೆದಿದ್ದಾಳೆ. ಅವುಗಳನ್ನು ವಾಪಸ್ ಮಾಡಿರಲಿಲ್ಲ. ಹಣವನ್ನು ಸಹ ಕೊಟ್ಟಿರಲಿಲ್ಲ. ಈ ಕುರಿತು ವಂಚನೆ ದೂರು ದಾಖಲಾಗಿತ್ತು. ಇದರ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಡಿ.ಕೆ ಸುರೇಶಗೆ ನೋಟಿಸ್ ಕೊಟ್ಟು ವಿಚಾರಣೆಗೆ ಬರಲು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article