Ad imageAd image

ನಟ ದರ್ಶನಗೆ ಪುಸ್ತಕ ಕಳಿಸಿದ ಸಿದ್ಧಾರೂಢ ಮಠ

ನಟ ದರ್ಶನ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆಗೈದ ಆರೋಪದ ಅಡಿಯಲ್ಲಿ ಪರಪ್ಪನ ಕಾರಗ್ರಹ ಸೇರಿದ್ದಾರೆ.

Nagesh Talawar
ನಟ ದರ್ಶನಗೆ ಪುಸ್ತಕ ಕಳಿಸಿದ ಸಿದ್ಧಾರೂಢ ಮಠ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ(Hubballi): ನಟ ದರ್ಶನ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆಗೈದ ಆರೋಪದ ಅಡಿಯಲ್ಲಿ ಪರಪ್ಪನ ಕಾರಗ್ರಹ ಸೇರಿದ್ದಾರೆ.

ಇದೀಗ ನಟ ದರ್ಶನ ಅವರಿಗೆ ಹುಬ್ಬಳ್ಳಿಯ ಸುಪ್ರಸಿದ್ಧ ಶ್ರೀ ಸಿದ್ದಾರೋಢಮಠದಿಂದ ಸಿದ್ದಾರೋಢರ ಚರಿತ್ರೆ ಪುಸ್ತಕ ಕಳಿಸಲಾಗಿದೆ. ಈ ಕುರಿತು ಶ್ರೀ ಸಿದ್ದಾರೋಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಡಾ.ಗೋವಿಂದ ಮಣ್ಣೂರು ಅವರು ಬೆಂಗಳೂರಿನ ಪರಪ್ಪನ ಕಾರಗ್ರಹದಲ್ಲಿರುವ ನಟ ದರ್ಶನ ತೂಗುದೀಪ ಅವರಿಗೆ ಕೋರಿಯರ್ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್’ವೊಂದು ಹರಿದಾಡುತ್ತಿದ್ದು, ಅದರಲ್ಲಿ ನಟ ದರ್ಶನ ಈ ಹಿಂದೆ ಹುಬ್ಬಳ್ಳಿಯ ಸಿದ್ದಾರೋಢಮಠಕ್ಕೆ ಭೇಟಿ ನೀಡಿ ದರ್ಶನ ಪಡೆದಿರುವ ಫೋಟೋ ಹಾಗೂ ಪುಸ್ತಕವನ್ನು ಕೊರಿಯರ್ ಮಾಡಿರುವ ಕವರ್ ಹರಿಬಿಡಲಾಗಿದೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.

WhatsApp Group Join Now
Telegram Group Join Now
Share This Article