ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸಿಕ್ಕಿಂ ರಾಜ್ಯ ಉದಯವಾಗಿ 50 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ವರ್ಚುವಲ್ ಸಭೆಯ ಮೂಲಕ ಶುಭ ಕೋರಿ ಮಾತನಾಡಿದರು. ಹಿಮಾಲಯದ ಈ ರಾಜ್ಯ ನಮ್ಮ ಹೆಮ್ಮೆಯಾಗಿದೆ. ಇಲ್ಲಿನ ಜನರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದರು. ಪಹಲ್ಗಾಮ್ ನಲ್ಲಿ ನಡೆದ ದಾಳಿ ಅಮಾನವೀಯವಾದದ್ದು. ಭಯೋತ್ಪಾದನೆ ಸೃಷ್ಟಿಸಿದವರಿಗೆ ಆಪರೇಷನ್ ಸಿಂಧೂರ ತಕ್ಕ ಉತ್ತರ ಎಂದರು.
ನಾನು ಸಿಕ್ಕಿಂಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಭಾಗಿಯಲು ಆಗಿಲ್ಲ. ಸಿಕ್ಕಿಂ ಸಾಹಸ ಕ್ರೀಡಾ ಕೇಂದ್ರವಾಗಲು ಸಾಮರ್ಥ್ಯ ಹೊಂದಿದೆ. ಸಿಕ್ಕಿ ಸೇರಿದಂತೆ ಈಶಾನ್ಯ ಭಾಗದ ರಾಜ್ಯಗಳು ಈ ದಿಕ್ಕಿನಲ್ಲಿ ಸಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.