Ad imageAd image

‘ನಮ್ಮದು ಭಾರತ್ ಜೋಡೋ ಯಾತ್ರೆ, ನಿಮ್ಮದು ಪಾಪ ವಿಮೋಚನಾ ಯಾತ್ರೆ’

ಇಲ್ಲಿನ ಮೈಶುಗರ್ ಕಾರ್ಖಾನೆಯ ಮೈದಾನದಲ್ಲಿ ಮಂಗಳವಾರ ಕಾಂಗ್ರೆಸ್ ವತಿಯಿಂದ ಜನಾಂದೋಲನ ಕಾರ್ಯಕ್ರಮ ನಡೆಸಲಾಯಿತು.

Nagesh Talawar
‘ನಮ್ಮದು ಭಾರತ್ ಜೋಡೋ ಯಾತ್ರೆ, ನಿಮ್ಮದು ಪಾಪ ವಿಮೋಚನಾ ಯಾತ್ರೆ’
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandaya): ಇಲ್ಲಿನ ಮೈಶುಗರ್ ಕಾರ್ಖಾನೆಯ ಮೈದಾನದಲ್ಲಿ ಮಂಗಳವಾರ ಕಾಂಗ್ರೆಸ್(Congress) ವತಿಯಿಂದ ಜನಾಂದೋಲನ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumara) ಎಂದಿನಂತೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾವು ಭಾರತ್ ಜೋಡೋ(bharat jodo yatra) ಯಾತ್ರೆ, ಕಾವೇರಿಗಾಗಿ, ಮೇಕೆದಾಟುಗಾಗಿ(Mekedaatu) ಪಾದಯಾತ್ರೆ ಮಾಡಿದ್ದೇವೆ. ನಿಮ್ಮದು ಪಾಪ ವಿಮೋಚನಾ ಯಾತ್ರೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಜನರ ಆಶೀರ್ವಾದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಹಾಗೂ ಜೆಡಿಎಸ್(BJP-JDS) ನವರು ಕುತಂತ್ರದಿಂದ ಬೀಳಿಸಲು ಹೊರಟಿದ್ದಾರೆ. ಹಿಂದುಳಿದ ಸಮುದಾಯದ ವ್ಯಕ್ತಿಯೊಬ್ಬ ಪ್ರತಿಷ್ಠಿತ ಹುದ್ದೆ ಅಲಂಕರಿಸಿದ್ದಕ್ಕೆ ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ಉದ್ದೇಶದಿಂದ ಹಳೆಯ ವೈರಿಗಳು ಮಿತ್ರರಾಗಿದ್ದಾರೆ. ಇದು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ವಿರುದ್ಧದ ಪಾದಯಾತ್ರೆ ಅಲ್ಲ. ಕಾಂಗ್ರೆಸ್ಸಿಗೆ 136 ಸ್ಥಾನ ಜನ ಗೆಲ್ಲಿಸಿದ ಬಡವರ ವಿರುದ್ಧ. ಸರ್ಕಾರ ಕಿತ್ತೊಗೆಯಲು ಕುಮಾರಣ್ಣ, ಯಡಿಯೂರಪ್ಪನವರೇ ನಿಮ್ಮ ಹಣೆಯಲ್ಲಿ ಬರೆದಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ಯು ಟರ್ನ್ ಹೊಡೆಯುವ ಕುಮಾರಸ್ವಾಮಿಯವೇ ಮುಡಾದಲ್ಲಿ(MUDA) ನಿಮ್ಮ ಹೆಸರಿರುವ ಬಗ್ಗೆ ನೀವು ಮಾತನಾಡುತ್ತಿಲ್ಲ. ನಮ್ಮ ನಾಯಕರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನೀವು ಉತ್ತರ ಕೊಡಬೇಕು. ಕಾಂಗ್ರೆಸ್ ಜನಪರ ಉದ್ದೇಶಕ್ಕಾಗಿ ಹಲವಾರ ಪಾದಯಾತ್ರೆಗಳನ್ನು ಮಾಡಿದೆ. ನಿಮ್ಮ ಈ ಜನವಿರೋಧ ಪಾದಯಾತ್ರೆ ವಿರುದ್ಧ ನಮ್ಮ ಜನಾಂದೋಲನ ನಿರಂತರವಾಗಿ ನಡೆಯುತ್ತಿದೆ ಎಂದರು.

WhatsApp Group Join Now
Telegram Group Join Now
Share This Article