Ad imageAd image

ಸೋಲಿನ ಹತಾಶೆ ಮೀರಿ ನಿಲ್ಲಬೇಕು: ಪ್ರಧಾನಿ ಮೋದಿ

Nagesh Talawar
ಸೋಲಿನ ಹತಾಶೆ ಮೀರಿ ನಿಲ್ಲಬೇಕು: ಪ್ರಧಾನಿ ಮೋದಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಚಳಿಗಾಲದ ಸಂಸತ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ಮೋದಿ, ಸಾರ್ವಜನಿಕ ವಿಷಯಗಳ ಕುರಿತು ಚರ್ಚೆಯಾಗಬೇಕು. ಸೋಲಿನ ಹತಾಶೆ ಸಂಸತ್ತಿನಲ್ಲಿ ಅಶಾಂತಿ ಸೃಷ್ಟಿಸಬಾರದು. ಕೆಲವು ಪಕ್ಷಗಳಿಗೆ ಇನ್ನು ಚುನಾವಣೆ ಸೋಲುಗಳನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.

ಈ ಅಧಿವೇಶನ ದೇಶದ ಪ್ರಗತಿಯನ್ನು ತೆಗೆದುಕೊಂಡು ಹೋಗುವ ನಿರಂತರ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ. ಪ್ರಜಾಪ್ರಭುತ್ವದ ಶಕ್ತಿ ಮಾತ್ರವಲ್ಲ ಆರ್ಥಿಕತೆಯ ಸ್ಥಿತಿಯ ಬಗ್ಗೆಯೂ ಜಗತ್ತು ಗಮನಿಸುತ್ತಿದೆ. ಹೀಗಾಗಿ ಸಂಸತ್ತಿನಲ್ಲಿ ದೇಶದ ಅಭಿವೃದ್ಧಿ ವಿಚಾರಗಳ ಕುರಿತು ಹೆಚ್ಚು ಚರ್ಚೆಗಳು ನಡೆಯಬೇಕು. ಅದಕ್ಕೆ ಆದ್ಯತೆ ನೀಡಬೇಕು ಎಂದರು.

WhatsApp Group Join Now
Telegram Group Join Now
Share This Article