Ad imageAd image

ಸತ್ಯವನ್ನು ಎದುರಿಸಲು ಆಗದೆ ಮೋದಿ ಸದನಕ್ಕೆ ಬರುತ್ತಿಲ್ಲ: ರಾಹುಲ್ ಗಾಂಧಿ

Nagesh Talawar
ಸತ್ಯವನ್ನು ಎದುರಿಸಲು ಆಗದೆ ಮೋದಿ ಸದನಕ್ಕೆ ಬರುತ್ತಿಲ್ಲ: ರಾಹುಲ್ ಗಾಂಧಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಪ್ರಧಾನಿಗೆ ವಿರೋಧ ಪಕ್ಷಗಳ ಸದಸ್ಯರಿಂದ ಬೆದರಿಕೆಯಿದೆ. ಆದ್ದರಿಂದ ಸದನಕ್ಕೆ ಬರಬೇಡಿ ಎಂದು ನಾನೇ ಹೇಳಿದ್ದೇನೆ ಅಂತಾ ಸ್ಪೀಕರ್ ಓಂ ಬಿರ್ಲಾ ಗುರುವಾರ ಹೇಳಿದ್ದರು. ಈ ಬಗ್ಗೆ ವಿಪಕ್ಷಗಳ ಸದಸ್ಯರು ಮತ್ತಷ್ಟು ಕೆರಳಿ ಕೆಂಡವಾಗಿದ್ದಾರೆ. ಸತ್ಯವನ್ನು ಎದುರಿಸಲು ಆಗದೆ ಪ್ರಧಾನಿ ಮೋದಿ ಸದನಕ್ಕೆ ಬರುತ್ತಿಲ್ಲವೆಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬಜೆಟ್ ಮೇಲೆ ಚರ್ಚೆ ನಡೆಸಲು ಸರ್ಕಾರಕ್ಕೆ ಭಯ. ಯಾಕಂದರೆ ಅಮೆರಿಕಾದೊಂದಗಿನ ವ್ಯಾಪಾರ ಒಪ್ಪಂದ, ಆ ವಿಚಾರದಲ್ಲಿ ನಡೆದುಕೊಂಡ ರೀತಿ, ರೈತರ ಮೇಲೆ ಬೀರುವ ಪರಿಣಾಮ ಎಂದಿದ್ದಾರೆ. ಅಲ್ಲದೆ ಸೇನೆ ಮಾಜಿ ಜನರಲ್ ಮನೋಜ್ ಮುಕಂದ್ ನರವಣೆಯವರ ಪುಸ್ತಕಕ್ಕೆ ಪ್ರಧಾನಿ ಹೆದರಿದ್ದಾರೆ. ಸಂಸದರಿಗೆ ಹೆದರಿಲ್ಲ. ಹೀಗಾಗಿಯೇ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಸಲ್ಲಿಸಲು ಬರಲಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

WhatsApp Group Join Now
Telegram Group Join Now
Share This Article