Ad imageAd image

ಚುನಾವಣೆ ಆಯುಕ್ತರಿಂದ ಪ್ರಜಾಭುತ್ವ ನಾಶ ಮಾಡುವವರ ರಕ್ಷಣೆ: ರಾಹುಲ್ ಗಾಂಧಿ

Nagesh Talawar
ಚುನಾವಣೆ ಆಯುಕ್ತರಿಂದ ಪ್ರಜಾಭುತ್ವ ನಾಶ ಮಾಡುವವರ ರಕ್ಷಣೆ: ರಾಹುಲ್ ಗಾಂಧಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಇಂದಿರಾ ಗಾಂಧಿ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಜಾಭುತ್ವ ನಾಶ ಮಾಡುವವರನ್ನು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮತದಾರರ ಹೆಸರು ಅಳಿಸಿಹಾಕಿರುವ ಬಗ್ಗೆ ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣೆ ಆಯೋಗ ನೀಡಬೇಕು ಎಂದರು.

ಕರ್ನಾಟಕದ ಆಳಂದದಲ್ಲಿ 2023ರ ಚುನಾವಣೆ ವೇಳೆ ಮತಗಳನ್ನು ಅಳಿಸಿ ಹಾಕುವ ಯತ್ನ ನಡೆದಿದೆ. 6,018 ಮತಗಳನ್ನು ಆಳಂದದಲ್ಲಿ ಅಳಿಸಿ ಹಾಕುವ ಯತ್ನ ನಡೆದಿದೆ ಎಂದರು. ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ ಮತಗಳನ್ನು ಸೇರಿಸುವ ಪ್ರಯತ್ನ ನಡೆಸಲಾಗಿದೆ. ಚುನಾವಣೆ ಆಯುಕ್ತರಾದ ಜ್ಞಾನೇಶ್ ಕುಮಾರ್ ವಿರುದ್ಧ ನಾನು ಗಂಭೀರ ಆರೋಪ ಮಾಡುತ್ತಿದ್ದೇನೆ ಎಂದು ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
Share This Article