ಪ್ರಜಾಸ್ತ್ರ ಸುದ್ದಿ
ರಾಂಚಿ(Ranchi): ದೆಹಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಛತ್ರಿಯ ಸಿಮಾರಿಯಾ ಹತ್ತಿರದ ಕಾಡಿನಲ್ಲಿ ಪತನಗೊಂಡಿದೆ. ಇದರಲ್ಲಿದ್ದ 7 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸೋಮವಾರ ಸಂಜೆ 7.10ಕ್ಕೆ ಬಿಟ್ಟ ಏರ್ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಬಳಿಕ ಪತನಗೊಂಡಿದೆ.
ರೋಗಿ, ಇಬ್ಬರು ಪೈಲೆಟ್ ಗಳು ಸೇರಿದಂತೆ 7 ಜನರು ಮೃತಪಟ್ಟಿದ್ದಾರೆ. ಪ್ರತಿಕೂಲ ಹವಾಮಾನ ವಾತವರಣದಿಂದಾಗಿ ವಿಮಾನ ಪತನಗೊಂಡಿರಬಹುದು. ನಿಖರ ಕಾರಣ ತಿಳಿದು ಬರಬೇಕಿದೆ ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ. ರೆಡ್ ಬರ್ಡ್ ಏರ್ ವೇಸ್ ಪ್ರೈ.ಲಿ ಕಂಪನಿಗೆ ಸೇರಿದ ಬೀಚ್ ಕ್ರಾಫ್ಟ್ ಸಿ 90 ಹೆಸರಿನ ಆರ್ ಆಂಬ್ಯುಲೆನ್ಸ್ ಪತನಗೊಂಡಿದೆ.




