Ad imageAd image

ದುರಂತದ ಬಳಿಕ ಇದೀಗ RCB ಮೊದಲ ಪೋಸ್ಟ್

Nagesh Talawar
ದುರಂತದ ಬಳಿಕ ಇದೀಗ RCB ಮೊದಲ ಪೋಸ್ಟ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaluru): 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಜಯಿಸಿತು. ಹೀಗಾಗಿ ಬಹುದೊಡ್ಡ ಸಂಭ್ರಮ ಆಚರಿಸಲು ಜೂನ್ 4ರಂದು ಬೆಂಗಳೂರಿಗೆ ಬಂದಾಗ ದೊಡ್ಡ ದುರಂತ ನಡೆಯಿತು. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ ಪರಿಣಾಮ ಕಾಲ್ತುಳಿತ ಉಂಟಾಗಿ 11 ಜನರು ಪ್ರಾಣ ಕಳೆದುಕೊಂಡರು. ಈ ದುರಂತ ನಡೆದು 85 ದಿನಗಳ ಬಳಿಕ ಆರ್ ಸಿಬಿ ಮೊದಲ ಬಾರಿಗೆ ಪೋಸ್ಟ್ ಮಾಡಿದೆ. 12ನೇ ಸೈನಿಕನ ಹೃದಯಪೂರ್ವಕ ಪತ್ರ ಎಂದು ಬರೆದು ಪೋಸ್ಟ್ ಮಾಡಿದೆ.

ನಾವು ಪೋಸ್ಟ್ ಮಾಡಿ ಸುಮಾರು 3 ತಿಂಗಳಾಗಿದೆ. ನಮ್ಮ ಮೌನ ಬರೀ ಖಾಲಿತನವಲ್ಲ ದುಃಖ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮೂಲಕ ನೀವೆಲ್ಲ ಸಂಭ್ರಮಿಸುವ ಕ್ಷಣಗಳನ್ನು, ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇವು. ಆದರೆ, ಜೂನ್ 4ರ ಘಟನೆ ಎಲ್ಲವನ್ನು ಬದಲಾಯಿಸಿತು. ನಮ್ಮ ಹೃದಯ ಒಡೆಯಿತು. ಈ ಮೌನ ಶ್ರದ್ಧೆಯಿಂದ ಕೂಡಿದ ಶ್ರದ್ಧಾಂಜಲಿ. ಈ ನೋವಿನ ಸಂದರ್ಭದಲ್ಲಿ ಸಾಕಷ್ಟು ವಿಷಯಗಳನ್ನು ಕಲಿತ್ತಿದ್ದೇವೆ. ಯೋಚಿಸಿದ್ದೇವೆ. ನೋವನ್ನೇ ನಂಬಿಕೆಯಾಗಿ, ಶ್ರದ್ಧೆಯಾಗಿ ಬದಲಾಯಿಸಬೇಕೆಂದ ಫಲವಾಗಿ ಆರ್ ಸಬಿ ಕೇರ್ಸ್ ಹುಟ್ಟುಕೊಂಡಿದೆ. ನಿಮ್ಮೊಂದಿಗೆ ನಿಲ್ಲುವ ಭರವಸೆಯೊಂದಿಗೆ ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ಪ್ರತಿಜ್ಞೆ ಎಂದು ಸುದೀರ್ಘವಾದ ಪೋಸ್ಟ್ ಮಾಡಿದೆ.

WhatsApp Group Join Now
Telegram Group Join Now
TAGGED:
Share This Article