Ad imageAd image

ಸಿಎಂ ಸ್ಥಾನಕ್ಕೆ ಏಳೆಂಟು ಮಂದಿ ಕಾಯುತ್ತಿದ್ದಾರೆ: ವಿಜಯೇಂದ್ರ

ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆ ಎಂದು ನಿತ್ಯ ಹೇಳುವ ಕೆಟ್ಟ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬಂದಿದೆ.

Nagesh Talawar
ಸಿಎಂ ಸ್ಥಾನಕ್ಕೆ ಏಳೆಂಟು ಮಂದಿ ಕಾಯುತ್ತಿದ್ದಾರೆ: ವಿಜಯೇಂದ್ರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆ ಎಂದು ನಿತ್ಯ ಹೇಳುವ ಕೆಟ್ಟ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬಂದಿದೆ. ಆದರೆ, ದಸರಾ ಬಳಿಕ ಅವರು ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ(BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಸಂಬಂಧ ದೆಹಲಿಯಲ್ಲಿಯೂ ಚರ್ಚೆ ನಡೆಯುತ್ತಿದೆ. ಸಿಎಂ ಸ್ಥಾನಕ್ಕೆ ಏಳೆಂಟು ಮಂದಿ ಕಾಯುತ್ತಿದ್ದಾರೆ ಎಂದರು.

ಮುಡಾ(Muda Case) ಪ್ರಕರಣ ಬರೀ 14 ನಿವೇಶನಗಳಿಗೆ ಸಂಬಂಧಿಸಿದ್ದಲ್ಲ, ಸಾವಿರಾರು ಕೋಟಿ ರೂಪಾಯಿ ಹಗರಣವಿದು. ಈ ಮೊದಲು ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿದವರ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ಅವರ ತಪ್ಪಿನ ಅರಿವಾಗಿದ್ದಕ್ಕೆ 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಸಿದ್ದರಾಮಯ್ಯನವರೆ ಸಚಿವ ಸತೀಶ್ ಜಾರಕಿಹೊಳಿಯನ್ನು ದೆಹಲಿಗೆ ಕಳಿಸಿದ್ದಾರೆ. ಯಾವ ಸಮಯದಲ್ಲಾದರೂ ಅವರು ರಾಜೀನಾಮೆ ನೀಡಬಹುದು ಅಂತಾ ಹೇಳಿದರು.

WhatsApp Group Join Now
Telegram Group Join Now
Share This Article