ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿದೆ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಹೋರಾಟ ಮಾಡುತ್ತಿದ್ದಾರೆ. ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈಗ ಖ್ಯಾತ ಕಾದಂಬರಿಕಾರ ಎಸ್.ಎಲ್ ಬೈರಪ್ಪ, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಭಾರತದ ಬಹುತೇಕ ಭಾಷೆಗಳಿಗೆ ಸಂಸ್ಕೃತವೇ ಮಾತೃಭಾಷೆ. ಕನ್ನಡ ಮತ್ತು ತಮಿಳು ಭಾಷೆಗಳು ಈ ಮಾತಿಗೆ ಹೊರತಲ್ಲ ಎಂದಿದ್ದಾರೆ.
ಕನ್ನಡ ಶಬ್ಧಕೋಶದ ಶೇಕಡ 65ರಷ್ಟು ಶಬ್ಧಗಳು ಹಾಗೂ ತಮಿಳು ಶಬ್ಧಕೋಶದ ಶೇಕಡ 20ರಷ್ಟು ಶಬ್ಧಗಳು ಸಂಸ್ಕೃತದಿಂದಲೇ ಬಂದಿವೆ. ಸಾಹಿತ್ಯ ಪದಭಂಡಾರವಲ್ಲದೇ ಆಧುನಿಕ ಜ್ಞಾನ, ವಿಜ್ಞಾನದ ಶಾಖೆಗಳ ಪರಿಭಾಷೆಯೂ ಸಂಸ್ಕೃತದಿಂದಲೇ ಪ್ರಭಾವಿಯಾಗಿದೆ ಎಂದು ಹೇಳಿದ್ದಾರೆ.kannada language