ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಆರ್ ಸಿಬಿ ವಿಜಯೋತ್ಸವ ಕಾರ್ಯಕ್ರಮಕ್ಕೆ 15 ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ವಿಧಾನಸೌಧ ಮುಂಭಾಗ ಹಾಗೂ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮಕ್ಕೆ ಆದ ಖರ್ಚು ಎಂದು ಹೇಳಲಾಗುತ್ತಿದೆ. ಐಪಿಎಲ್ ಇವೆಂಟ್ ಮ್ಯಾನೇಜ್ ಮೆಂಟ್ ಜವಾಬ್ದಾರಿ ವಹಿಸಿಕೊಂಡಿರುವ ಡಿಎನ್ಎ ಸಂಸ್ಥೆ ವಿಜಯೋತ್ಸವದ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಆದರೆ, ಜನರು ಸೇರುವ ನಿರೀಕ್ಷೆಯನ್ನು ಅಂದಾಜಿಸುವಲ್ಲಿ ಹಾಗೂ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ಆಯೋಜಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.
ಡಿಎನ್ಎ ಎಂಟರ್ ಟೈನ್ ಮೆಂಟ್ ನಟ್ ವರ್ಕ್ ಪ್ರೈ.ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಕ್ಕಳಿಗೆ ಸೇರಿದ್ದು, ಸರ್ಕಾರದಲ್ಲಿಯೂ ಅವರ ಪ್ರಭಾವ ಇದೆಯಂತೆ. ಕಾರ್ಯಕ್ರಮವನ್ನು ಮೊದಲು ಶನಿವಾರ ಮಾಡಬೇಕು ಎಂದು ಯೋಚಿಸಲಾಗಿತ್ತಂತೆ. ಆದರೆ, ಸಚಿವರೊಬ್ಬರ ಒತ್ತಡದಿಂದಾಗಿ ಬುಧವಾರವೇ ನಡೆಸಲಾಗಿದೆ. ಅಧಿಕಾರಿಗಳು ಸಹ ಒತ್ತಡ ಹಾಕಿ, ಮುಖ್ಯಮಂತ್ರಿಗಳಿಗೂ ಸಲಹೆ ನೀಡಿದ್ದರಂತೆ.