Ad imageAd image

ದೇವರ ಹಿಪ್ಪರಗಿ: ಬಸ್ ಡಿಕ್ಕಿ, ವಿದ್ಯಾರ್ಥಿ ಸಾವು

Nagesh Talawar
ದೇವರ ಹಿಪ್ಪರಗಿ: ಬಸ್ ಡಿಕ್ಕಿ, ವಿದ್ಯಾರ್ಥಿ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ದೇವರ ಹಿಪ್ಪರಗಿ(Devara Hipparagi): ಕೆಎಸ್‌ಆರ್‌ಟಿಸಿ(KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ 10ನೇ ತರಗತಿ ವಿದ್ಯಾರ್ಥಿ(Student) ಮೃತಪಟ್ಟಿರುವ ಘಟನೆ ಬನಹಟ್ಟಿ ಪಿ.ಎ ಗ್ರಾಮದ ಹತ್ತಿರ ಸೋಮವಾರ ನಡೆದಿದೆ. ವಿದ್ಯಾರ್ಥಿ ಸಂದೀಪ ಶಿವಾನಂದ ಗಿಡ್ಡಯಲ್ಲಪ್ಪಗೋಳ(16) ಮೃತ ದುರ್ದೈವಿ. ಸಿಂದಗಿಯ ಎಚ್‌.ಜಿ.ಶಾಲೆಗೆ ಹೋಗಲು ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಕಲಕೇರಿ ಸಿಂದಗಿ ಬಸ್ ಚಾಲಕನ ನಿರ್ಲಕ್ಷ ಹಾಗೂ ಅತಿ ವೇಗದಿಂದ ಬಸ್ ಬಂದು ವಿದ್ಯಾರ್ಥಿಗೆ ಡಿಕ್ಕಿ(Accident) ಹೊಡೆದು ಈ ದುರಂತ ನಡೆದಿದೆ.

ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ದೇವರಹಿಪ್ಪರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

WhatsApp Group Join Now
Telegram Group Join Now
Share This Article