Ad imageAd image

NCERT ಪಠ್ಯದಲ್ಲಿ ನ್ಯಾಯಾಂಗ ನಿಂದನೆ: ಯಾರನ್ನೂ ಬಿಡಲ್ಲ ಎಂದ ಸುಪ್ರೀಂ

Nagesh Talawar
NCERT ಪಠ್ಯದಲ್ಲಿ ನ್ಯಾಯಾಂಗ ನಿಂದನೆ: ಯಾರನ್ನೂ ಬಿಡಲ್ಲ ಎಂದ ಸುಪ್ರೀಂ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಎನ್ ಸಿಇಆರ್ ಟಿ ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಕುರಿತು 8ನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರಿಸಲಾಗಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಚಾಟಿ ಬೀಸಿದೆ. ಪಠ್ಯಪುಸ್ತಕವನ್ನು ನಿಷೇಧಿಸಿದೆ. ಡಿಜಿಟಲ್ ಕಾಪಿಗಳನ್ನು ಸಹ ತೆಗೆದುಹಾಕಬೇಕು ಎಂದು ಆದೇಶಿಸಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಕುಗ್ಗಿಸಲು ಉದ್ದೇಶಪೂರ್ವಕವಾಗಿ ಮಾಡಿದ ಕ್ರಮ ಇದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿದ್ಧ ಪೀಠ ಹೇಳಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ತನ್ನ ನಿರ್ದೇಶನಗಳನ್ನು ಪಾಲಿಸಬೇಕು. ಇದನ್ನು ಉಲ್ಲಂಘಿಸಿದರೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ನಾವು ಕೂಲಂಕಷವಾಗಿ ಪರಿಶೀಪನೆ ನಡೆಸುತ್ತೇವೆ. ಇಂತಹದ್ದನ್ನು ನಿಯಂತ್ರಿಸದಿದ್ದರೆ ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಹಾಳು ಮಾಡುತ್ತದೆ. ಇದಕ್ಕೆ ಯಾರು ಹೊಣೆಗಾರರು ಎಂದು ತಿಳಿದುಕೊಳ್ಳುವುದು ನ್ಯಾಯಾಂಗದ ಮುಖ್ಯಸ್ಥರಾಗಿ ನನ್ನ ಕರ್ತವ್ಯ ಎಂದು ಸಿಜೆಐ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article