Ad imageAd image

ರಾಜ್ಯಕ್ಕೆ ಬರುವ ಸುರ್ಜೇವಾಲ್ ನನಗೇನು ತಾಕೀತು ಮಾಡುತ್ತಾರೆ?: ಸಚಿವ ಕೆ.ಎನ್ ರಾಜಣ್ಣ

Nagesh Talawar
ರಾಜ್ಯಕ್ಕೆ ಬರುವ ಸುರ್ಜೇವಾಲ್ ನನಗೇನು ತಾಕೀತು ಮಾಡುತ್ತಾರೆ?: ಸಚಿವ ಕೆ.ಎನ್ ರಾಜಣ್ಣ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ರಾಜ್ಯ ಕಾಂಗ್ರೆಸ್ ನಾಯಕರ ಬಹಿರಂಗ ಅಸಮಾಧಾನ, ಹೇಳಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ಗರಂ ಆಗಿದೆ. ಹೀಗಾಗಿ ಜೂನ್ 30ರಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್ ಬರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಹಿರಂಗ ಮಾತನಾಡದಂತೆ ಹೈಕಮಾಂಡ್ ಸೂಚನೆ ಕೊಟ್ಟಿದ್ದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಎನ್ ರಾಜಣ್ಣ, ಪಕ್ಷದ ನಾಯಕರೊಂದಿಗೆ ಸುರ್ಜೇವಾಲ್ ಚರ್ಚೆ ಮಾಡುತ್ತಾರೆ. ನನಗೇನು ತಾಕೀತು ಮಾಡಲು ಸಾಧ್ಯ ಎಂದು ಹೇಳಿದರು.

ಡಿ.ಕೆ ಶಿವಕುಮಾರ್ ಅವರನ್ನು ಪ್ರಧಾನಿ, ಮುಖ್ಯಮಂತ್ರಿಯನ್ನೇ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಸತೀಶ್ ಜಾರಕಿಹೊಳಿ ಅಧ್ಯಕ್ಷರಾಗಬಹುದು ಎಂದುಕೊಂಡಿದ್ದೇನೆ. ನಾನು ಹೇಳಿದ ತಕ್ಷಣ ಕ್ರಾಂತಿಯಾಗುವುದಿಲ್ಲ ಎಂದರು.

WhatsApp Group Join Now
Telegram Group Join Now
Share This Article