Ad imageAd image

ರಾಜ್ಯದಲ್ಲಿ ಅಪಘಾತಕ್ಕೆ ದಿನಕ್ಕೆ 40 ಜನರ ಸಾವು

Nagesh Talawar
ರಾಜ್ಯದಲ್ಲಿ ಅಪಘಾತಕ್ಕೆ ದಿನಕ್ಕೆ 40 ಜನರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaluru): ರಾಜ್ಯದಲ್ಲಿ ನಿತ್ಯ ನಡೆಯವ ಅಪಘಾತದಲ್ಲಿ ಸರಾಸರಿ 40 ಜನರನ್ನು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಧಾನ ಪರಿಷತ್ತಿನಲ್ಲಿ ಬುಧವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. 2020ರಿಂದ ಇಲ್ಲಿಯ ತನಕ 1 ಲಕ್ಷದ 13 ಸಾವಿರ 192 ಅಪಘಾತ ಪ್ರಕರಣಗಳು ನಡೆದಿವೆ. ಇದರಲ್ಲಿ ಬರೋಬ್ಬರಿ 60 ಸಾವಿರದ 115 ಜನರು ಮೃತಪಟ್ಟಿದ್ದಾರೆ.

ಪರಿಷತ್ ಸದಸ್ಯ ಕೆ.ಎನ್ ನವೀನ್ ಕೇಳಿದ ಪ್ರಶ್ನೆಗೆ ಸಾರಿಗೆ ಸಚಿವರು ಉತ್ತರಿಸಿದ್ದಾರೆ. ಎಷ್ಟೇ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಅಪಘಾತ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅತಿಯಾದ ವೇಗದಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ವರ್ಷಕ್ಕೆ ಅಂದಾಜು 10 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಯುವಕರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article