Ad imageAd image

ಒಬ್ಬಳಿಗಾಗಿ ಇಬ್ಬರ ಹೊಡೆದಾಟ, ಒಬ್ಬನ ಕೊಲೆ

ಒಂದೇ ಹುಡುಗಿಯನ್ನು ಇಬ್ಬರು ಯುವಕರು ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ಅವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

Nagesh Talawar
ಒಬ್ಬಳಿಗಾಗಿ ಇಬ್ಬರ ಹೊಡೆದಾಟ, ಒಬ್ಬನ ಕೊಲೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಒಂದೇ ಹುಡುಗಿಯನ್ನು ಇಬ್ಬರು ಯುವಕರು(triangle love )ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ಅವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ರೀತಿ ಶುಕ್ರವಾರ ಸಹ ಅವರಿಬ್ಬರ ನಡುವೆ ಜಗಳ ನಡೆದಿದೆ. ಅದು ತಾರಕಕ್ಕೆ ಹೋಗಿ ಒಬ್ಬನ ಕೊಲೆಯಲ್ಲಿ(Murder) ಅಂತ್ಯವಾಗಿದೆ. ವರುಣ್ ಕೊಲೆಯಾದ ಯುವಕ, ದಿನೇಶ್ ಎನ್ನುವ ಯುವಕ ಚಾಕುವಿನಿಂದ ಇರಿದಿದ್ದಾನೆ. ಚಿಕಿತ್ಸೆ ಫಲಿಸದೆ ವರುಣ್ ಮೃತಪಟ್ಟಿದ್ದಾನೆ.

ಸಂಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇವರಿಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ(Love) ವಿಚಾರ ಆಕೆಗೆ ಗೊತ್ತಿತ್ತಾ? ಇವರಿಬ್ಬರಲ್ಲಿ ಹುಡುಗಿ ಯಾರನ್ನಾದರೂ ಪ್ರೀತಿಸುತ್ತಿದ್ದಳಾ? ಅಥವ ಇವರಿಬ್ಬರದು ಒನ್ ಸೈಡ್ ಲವ್ ಕಹಾನಿನಾ ಏನು ಅನ್ನೋದು ತನಿಖೆಯಿಂದ ತಿಳಿದು ಬರಬೇಕಿದೆ.

WhatsApp Group Join Now
Telegram Group Join Now
Share This Article