Ad imageAd image

ಯುವಕನ ಕೈ ಕಡಿದ ಘಟನೆ, ರೌಡಿಗಳ ಕಾಲಿಗೆ ಗುಂಡೇಟು

Nagesh Talawar
ಯುವಕನ ಕೈ ಕಡಿದ ಘಟನೆ, ರೌಡಿಗಳ ಕಾಲಿಗೆ ಗುಂಡೇಟು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ರಾಮನಗರ(Ramanagara): ಕನಕಪುರ ತಾಲೂಕಿನ ಮಳಗಾಳಿನಲ್ಲಿ ಇತ್ತೀಚೆಗೆ ದಲಿತ ಯುವಕನ ಕೈ ಕಡಿದ ಪ್ರಕರಣ ಸಂಬಂಧ ಆರೋಪಿಗಳಾದ ರೌಡಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂದಿಸಿದ್ದಾರೆ. ಭಾನುವಾರ ಮುಂಜಾನೆ ಕಗ್ಗಲಿಪುರದ ಹತ್ತಿರ ಗುಂಡಿನ ದಾಳಿ ನಡೆದಿದೆ. ರೌಡಿಗಳಾದ ಕರುಣೇಶ್ ಅಲಿಯಾಸ್ ಕಣ್ಣನ ಹಾಗೂ ಹರ್ಷಾ ಅಲಿಯಾಸ್ ಕೈಮ ಅನ್ನೋ ರೌಡಿಗಳ(Rawdi) ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ ರೌಡಿಗಳು ಕಗ್ಗಲಿಪುರದಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕ ಪೊಲೀಸರು ನಸುಕಿನ ಜಾವ 5 ಗಂಟೆಗೆ ಹೋಗಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣೆ ಪಿಎಸ್ಐ ಮಿಥುನ್ ಶಿಲ್ಪಿ, ಗ್ರಾಮಾಂತರ ಠಾಣೆ ಪಿಎಸ್ಐ ಕೃಷ್ಣ ಲಮಾಣಿ, ಮನೋಹರ್, ರವಿಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಹೋದಾಗ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಅವರ ಕಾಲಿಗೆ ಗುಂಡೇಟು(Firing) ಹಾರಿಸಿ ಬಂಧಿಸಲಾಗಿದೆ.

ಘಟನೆಯಲ್ಲಿ 7 ಜನರು ಭಾಗಿಯಾಗಿರುವ ಮಾಹಿತಿ ಇತ್ತು. ಕೃತ್ಯ ನಡೆದ ಮರುದಿನ ಐವರನ್ನು ಬಂಧಿಸಲಾಗಿದೆ. ಇವರಿಬ್ಬರು ತಲೆ ಮರೆಸಿಕೊಂಡಿದ್ದರು. ಘಟನೆ ಬಳಿಕ ರಾಮನಗರ ಜಿಲ್ಲೆಯಾದ್ಯಂತ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಪರಿಶಿಷ್ಟ ಜಾತಿ(SC) ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಯಿತು. ಡಿವೈಎಸ್ಪಿ ಕೆ.ಸಿ ಗಿರಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ಎಸ್ಪಿ ರಚಿಸಿದ್ದರು. ವಾರದ ಬಳಿಕ ಉಳಿದಿಬ್ಬರು ಸಿಕ್ಕಿಬಿದ್ದಿದ್ದಾರೆ.

WhatsApp Group Join Now
Telegram Group Join Now
Share This Article