Ad imageAd image

ಪತಿ ಕೊಂದು ಕಥೆ ಕಟ್ಟಿದ ಪತ್ನಿ, ಅತ್ತೆ ಬಂಧನ

ಪತಿಯೊಂದು ಕೊಂದು ಅಸಹಜ ಸಾವು ಎನ್ನುವಂತೆ ಬಿಂಬಿಸಿದ್ದ ಪತ್ನಿ ಹಾಗೂ ಮಗಳಿಗೆ ಸಾಥ್ ನೀಡಿದ ತಾಯಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

Nagesh Talawar
ಪತಿ ಕೊಂದು ಕಥೆ ಕಟ್ಟಿದ ಪತ್ನಿ, ಅತ್ತೆ ಬಂಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ಪತಿಯೊಂದು ಕೊಂದು ಅಸಹಜ ಸಾವು ಎನ್ನುವಂತೆ ಬಿಂಬಿಸಿದ್ದ ಪತ್ನಿ ಹಾಗೂ ಮಗಳಿಗೆ ಸಾಥ್ ನೀಡಿದ ತಾಯಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಕೊಲೆಯಾದ ವಿನಾಯಕ್ ಜಾದವ್ ಪತ್ನಿ(Wife) ರೇಣುಕಾ, ತಾಯಿ ಶೋಭಾ ಬಂಧಿತರು. ಕಳೆದ ಜುಲೈ 29ರ ರಾತ್ರಿ ಈ ಘಟನೆ ನಡೆದಿದೆ. ಈಗ ಕೊಲೆಗಾರರು(Killers) ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮಗಳು, ತಾಯಿಯನ್ನು ಬಂಧಿಸಿದ್ದಾರೆ.

ವಿನಾಯಕ್ ಜಾದವ್ ಉದ್ಯಮಭಾಗದಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದ. ಅದರಲ್ಲಿ ನಷ್ಟವಾದ ಮೇಲೆ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಹೀಗಾಗಿ ಮನೆಯನ್ನು ಸಾಲಕ್ಕೆ ಅಡವಿಟ್ಟು ಕಳೆದ ಮೂರು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಜುಲೈ 29ರಂದು ಮದ್ಯಪಾನ ಮಾಡಿ ಮನೆಗೆ ಬಂದಿದ್ದಾನೆ. ಆಗ ಪತಿ, ಪತ್ನಿ ನಡುವೆ ಜಗಳವಾಗಿದೆ. ಇದರು ವಿಪರೀತಕ್ಕೆ ಹೋಗಿದೆ. ಆಗ ಪತ್ನಿ ರೇಣುಕಾ, ಪತಿಯ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ(Murder) ಮಾಡಿದ್ದಾಳೆ. ಇದಕ್ಕೆ ಆಕೆಯ ತಾಯಿ ಶೋಭಾ ಸಾಥ್ ನೀಡಿದ್ದಾಳೆ.

ನಂತರ ಶವವನ್ನು ಮನೆಯ ಮುಂಭಾಗದಲ್ಲಿ ಎಸೆದಿದ್ದಾರೆ. ಮುಂಜಾನೆ ನೆರೆ ಹೊರೆಯವರಿಗೆ ವಿನಾಯಕ್ ಮದ್ಯಪಾನ ಮಾಡಿ ಬಿದ್ದಿದ್ದಾನೆ ನೋಡಿ ಎಂದು ಹೇಳಿ ಅಸಹಜ ಸಾವು ಎಂದು ಬಿಂಬಿಸಿದ್ದರು. ಆದರೆ, ಮೃತ ವಿನಾಯಕ್ ಸಹೋದರ ಅರುಣ್ ಇದು ಅಸಹಜ ಸಾವಲ್ಲ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೋಸ್ಟ್ ಮಾರ್ಟಮ್(PM) ವರದಿ ಬಂದ ಬಳಿಕ ಸತ್ಯ ಬಯಲಾಗಿದೆ. ತಪ್ಪು ಮಾಡಿದವರು ಈಗ ಜೈಲು ಸೇರಿದ್ದಾರೆ.

WhatsApp Group Join Now
Telegram Group Join Now
Share This Article