Ad imageAd image

ಥಿನ್ನರ್ ಸೇವಿಸಿ ಬಾಲಕ ಸಾವು, ಕುಟುಂಬಸ್ಥರ ಆಕ್ರಂದನ

Nagesh Talawar
ಥಿನ್ನರ್ ಸೇವಿಸಿ ಬಾಲಕ ಸಾವು, ಕುಟುಂಬಸ್ಥರ ಆಕ್ರಂದನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ರಾಯಚೂರು(Raichoru): ಊರಿನ ಜಾತ್ರೆಯ ಹಿನ್ನಲೆಯಲ್ಲಿ ಮನೆಗೆ ಹಚ್ಚಲು ಪೇಂಟ್ ಮಾಡಲಾಗುತ್ತಿತ್ತು. ಈ ವೇಳೆ 3 ವರ್ಷದ ಬಾಲಕ ಆಕಸ್ಮಿಕವಾಗಿ ಥಿನ್ನರ್ ಸೇವಿಸಿ ಮೃತಪಟ್ಟ ಘಟನೆ ಮಾನ್ವಿ ತಾಲೂಕಿನ ಹಿರೆಕೊಟ್ನೇಕಲನಲ್ಲಿ ನಡೆದಿದೆ. ಶಿವಾರ್ಜುನ(03) ಎನ್ನುವ ಬಾಲಕ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಾತ್ರೆಯ ಖುಷಿಯಲ್ಲಿದ್ದ ಮನೆಯಲ್ಲಿ ಕಾರ್ಮೋಡ ಕವಿದಿದೆ.

ಥಿನ್ನರ್ ಸೇವಿಸಿದ ಬಾಲಕ ಅಸ್ವತ್ಥಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಏನು ಅರಿಯದ ಮಗುವನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ.

WhatsApp Group Join Now
Telegram Group Join Now
Share This Article