Ad imageAd image

ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಆ ಎರಡು ಘಟನೆಗಳು ಕಾರಣ!

Nagesh Talawar
ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಆ ಎರಡು ಘಟನೆಗಳು ಕಾರಣ!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ಬೂದನೂರು ಗ್ರಾಮದಲ್ಲಿ ನಡೆದಿದೆ. ಮಹಾದೇವಸ್ವಾಮಿ, ಪತ್ನಿ ಹಾಗೂ ಕಿರಿಯ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯ ಮಗಳು ಪ್ರೀತಿಸಿದ ಹುಡುಗನೊಂದಿಗೆ ಹೋಗಿದ್ದರಿಂದ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇನ್ನೊಂದು ಘಟನೆ ಮಹಾದೇವಸ್ವಾಮಿ ತಮ್ಮನ ಪತ್ನಿ ಸಹ ಎರಡು ವರ್ಷಗಳ ಹಿಂದೆ ಕೇರಳ ಮೂಲದ ಕೂಲಿ ಕೆಲಸಗಾರನೊಂದಿಗೆ ಓಡಿ ಹೋಗಿದ್ದಾಳಂತೆ.

ಮಹಾದೇವಸ್ವಾಮಿ ಅಂದೇ ಆತ್ಮಹತ್ಯೆಗೆ ನಿರ್ಧರಿಸಿದ್ದರಂತೆ. ಆದರೆ ವಯಸ್ಸಾದ ತಂದೆ ತಾಯಿ ಇರುವಾಗ ಸರಿಯಲ್ಲ ಎಂದು ಬಿಟ್ಟಿದ್ದರಂತೆ. ಬೂದನೂರ ಗ್ರಾಮದ ಮನೆ, ಹೆಚ್.ಡಿ ಕೋಟಿ ಮನೆ, ಜಮೀನು ತಮ್ಮನಿಗೆ ನೀಡಬೇಕು. ಮನೆಯಲ್ಲಿರುವ 2.5 ಲಕ್ಷ ರೂಪಾಯಿ ಸಹ ಸಹೋದರನಿಗೆ ನೀಡಬೇಕು. ಇದರಲ್ಲಿ ಯಾವುದು ತಮ್ಮ ಹಿರಿಯ ಮಗಳಿಗೆ ನೀಡಬಾರದು. ತಮ್ಮನ್ನು ಅಗ್ನಿಸ್ಪರ್ಶದ ಮೂಲಕ ಸಂಸ್ಕಾರ ನಡೆಸಬೇಕು ಎಂದು ಡತ್ ನೋಟ್ ನಲ್ಲಿ ತಿಳಿಸಿದ್ದಾರೆ. ಮಹಾದೇವಸ್ವಾಮಿ ಯಾರಿಗೆಲ್ಲ ಹಣ ಕೊಡಬೇಕಿತ್ತೋ ಅವರಿಗೆಲ್ಲ ಗೂಗಲ್ ಪೇ ಮೂಲಕ ಪಾವತಿಸಿದ್ದಾರಂತೆ. ಅವಮಾನ, ಮರ್ಯಾದಗೆ ಅಂಜಿ ಮೂರು ಜೀವಗಳು ಬಲಿಯಾಗಿದ್ದು ಮಾತ್ರ ದುರಂತ.

WhatsApp Group Join Now
Telegram Group Join Now
Share This Article