Ad imageAd image

ಸೇನಾ ವಾಹನ ಅಪಘಾತ: ಕರ್ನಾಟಕದ ಮೂವರು ಯೋಧರು ಹುತಾತ್ಮ

Nagesh Talawar
ಸೇನಾ ವಾಹನ ಅಪಘಾತ: ಕರ್ನಾಟಕದ ಮೂವರು ಯೋಧರು ಹುತಾತ್ಮ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಜಮ್ಮು ಮತ್ತು ಕಾಶ್ಮೀರ(Jammu and Kashmir): ಜಮ್ಮು ಮತ್ತು ಕಾಶ್ಮರದ ಪೂಂಚ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸೇನಾ ವಾಹನ ಅಪಘಾತವಾಗಿದೆ. ಈ ವೇಳೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಮೂವರು ಕರ್ನಾಟಕದವರಾಗಿದ್ದಾರೆ. ಪೂಂಚ್ ಜಿಲ್ಲೆಯ ಮಂಧರ್ ಪ್ರದೇಶದ ಬಲ್ನೋಯಿ ಹತ್ತಿರ ದಾರಿ ತಪ್ಪಿ ಸುಮಾರು 100 ರಿಂದ 150 ಅಡಿ ಆಳದ ಕಂದಕ್ಕೆ ಉರುಳಿಬಿದ್ದಿದೆ. ಈ ವಾಹನದಲ್ಲಿ 10 ಸೈನಿಕರಿದ್ದರು. ಗಾಯಗೊಂಡವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಐವರು ಯೋಧರಲ್ಲಿ ಬೆಳಗಾವಿಯ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ ತಿರಕಣ್ಣವರ(45), ಕುಂದಾಪುರದ ಕೋಟೇಶ್ವರ ಬಿಜಾಡಿಯ ಅನೂಪ್(33) ಹಾಗೂ ಮಹಾಲಿಂಗಪುರದ ಮಹೇಶ್(25) ಮೃತ ಯೋಧರಾಗಿದ್ದಾರೆ. ಈ ವಿಚಾರ ತಿಳಿದು ಕುಟುಂಬಸ್ಥರಿಗೆ ಆಘಾತವಾಗಿದೆ. ಯೋಧರ ಸ್ವಗ್ರಾಮಗಳಲ್ಲಿ ದುಃಖದ ವಾತಾವರಣವಿದೆ. ಭಾರತೀಯ ಸೇನೆಯ ಪ್ರಕ್ರಿಯೆಗಳು ಮುಗಿದು ಇಂದು ಸಂಜೆ ಅಥವ ನಾಳೆ ಪಾರ್ಥಿವ ಶರೀರ ಗ್ರಾಮಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Share This Article