Ad imageAd image

ಕಲಬುರಗಿಯಲ್ಲಿ ತ್ರಿಬಲ್ ಮರ್ಡರ್

Nagesh Talawar
ಕಲಬುರಗಿಯಲ್ಲಿ ತ್ರಿಬಲ್ ಮರ್ಡರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕಲಬುರಗಿ(Kalaburagi): ಕಲಬುರಗಿ ಜಿಲ್ಲೆಯಲ್ಲಿ ಬರೋಬ್ಬರಿ ಮೂವರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ನಗರದ ಹೊರವಲದಯಲ್ಲಿರುವ ಡ್ರೈವರ್ ಡಾಬಾದಲ್ಲಿ ಇಂತಹದೊಂದು ಭೀಕರ ಘಟನೆ ನಡೆದಿದೆ. ಇದರಿಂದಾಗಿ ಸ್ಥಳೀಯರು ಆತಂಕದಲ್ಲಿದ್ದಾರೆ. ರಾಮಚಂದ್ರ(35), ಸಿದ್ಧಾರೂಢ(32) ಹಾಗೂ ಜಗದೀಶ್(25) ಕೊಲೆಯಾದ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ ಸುಮಾರು 1.30ಕ್ಕೆ ಡಾಬಾಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷದ ಕಾರಣಕ್ಕೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಮೇಲಿಂದ ಮೇಲೆ ಹತ್ಯೆಗಳು ನಡೆಯುತ್ತಲೇ ಇವೆ. ಒಂದು ವಾರ ಕಳೆದಿರಲ್ಲ ಹತ್ಯೆಯ ಪ್ರಕರಣ ನಡೆಯುತ್ತೆ. ಇದರಿಂದಾಗಿ ಜನರು ಭಯದಿಂದ ಬದುಕುವಂತಾಗಿದೆ.

WhatsApp Group Join Now
Telegram Group Join Now
Share This Article