Ad imageAd image

ತಾಯಿ ಸಾವಿನಿಂದ ಮನನೊಂದು ಮಕ್ಕಳಿಬ್ಬರು ಆತ್ಮಹತ್ಯೆ!

Nagesh Talawar
ತಾಯಿ ಸಾವಿನಿಂದ ಮನನೊಂದು ಮಕ್ಕಳಿಬ್ಬರು ಆತ್ಮಹತ್ಯೆ!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ(Chikkaballapura): ತಾಯಿ ಸಾವಿನಿಂದಾಗಿ ಮಾನಸಿಕವಾಗಿ ಸಾಕಷ್ಟು ನೊಂದಿದ್ದ ಮಕ್ಕಳಿಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶುಕ್ರವಾರ ಮುಂಜಾನೆ ಶಿಡ್ಲಘಟ್ಟದಲ್ಲಿ ನಡೆದಿದೆ. ನವ್ಯಾ(24) ಹಾಗೂ ಸಹೋದರ ಪ್ರಭು(22) ಆತ್ಮಹತ್ಯೆ(Suicide) ಮಾಡಿಕೊಂಡ ದುರ್ದೈವಿಗಳು.

ಇವರ ತಾಯಿ(Mother) ಲಲಿತಮ್ಮ ಇತ್ತೀಚೆಗೆ ಮೃತಪಟ್ಟಿದ್ದಾರೆ. ಇದರಿಂದಾಗಿ ಅಕ್ಕ ಹಾಗೂ ತಮ್ಮ(Sister-Brother) ಮಾನಸಿಕವಾಗಿ ಸಾಕಷ್ಟು ನೊಂದಿದ್ದರು. ಇದೇ ಕಾರಣಕ್ಕೆ ಇಂದು ಮುಂಜಾನೆ ಶಿಡ್ಲಘಟ್ಟ ಮಾರ್ಗವಾಗಿ ಕೋಲಾರಕ್ಕೆ ತೆರಳುವ ರೈಲಿಗೆ ಶೆಟ್ಟಪ್ಪನ ತೋಪಿನ ರೈಲು ಹಳಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬರುತ್ತಿದೆ. ತಂದೆಯೊಂದಿಗೆ ಇವರಿಬ್ಬರು ಕೂಲಿ ಕೆಲಸ ಮಾಡುತ್ತಿದ್ದರು.

WhatsApp Group Join Now
Telegram Group Join Now
Share This Article