ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಮೀನು ವಿಚಾರವಾಗಿ ನಡೆದ ಜಗಳದಲ್ಲಿ ಚಿಕ್ಕಪ್ಪನ ಅಣ್ಣನ ಮಗನನ್ನು ಹತ್ಯೆ ಮಾಡಿದ ಘಟನೆ ಜಿಲ್ಲೆಯ ಚಡಚಣತ ತಾಲೂಕಿನ ಶಿರಡೋಣ ಗ್ರಾಮದಲ್ಲಿ ನಡೆದಿದೆ. ಬೀರಪ್ಪ ಸೀರೆಪ್ಪ ಸೊಲಂಕರ ಕೊಲೆಯಾದ ಯುವಕನಾಗಿದ್ದಾನೆ. ಅಮಸಿದ್ದ ಸಿದ್ದರಾವ ಸೊಲಂಕರ ಕೊಲೆಯ ಆರೋಪಿ ಚಿಕ್ಕಪ್ಪನಾಗಿದ್ದಾನೆ.
ಜಮೀನಿನಲ್ಲಿನ ಸೀಮೆ ವಿಚಾರವಾಗಿ ಗಲಾಟೆಯಾಗಿದೆ. ಈ ವೇಳೆ ಕೊಡಲಿಯಿಂದ ಬೀರಪ್ಪನ ಕುತ್ತಿಗೆಗೆ ಹೊಡೆದ ಚಿಕ್ಕಪ್ಪ ಅಮಸಿದ್ದ ಕೊಲೆ ಮಾಡಿದ್ದಾನೆ. ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಕುರಿತು ತನಿಖೆ ನಡೆಸಲಾಗುತ್ತಿದೆ.