Ad imageAd image

ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ವರುಣನ ಆರ್ಭಟ

ರಾಜ್ಯ ರಾಜಧಾನಿಯಲ್ಲಿ ಸೋಮವಾರ ಮುಂಜಾನೆಯೇ ಮಳೆರಾಯ ಆಗಮನವಾಗಿದೆ. ನಸುಕಿನ ಜಾವ

Nagesh Talawar
ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ವರುಣನ ಆರ್ಭಟ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ರಾಜ್ಯ ರಾಜಧಾನಿಯಲ್ಲಿ ಸೋಮವಾರ ಮುಂಜಾನೆಯೇ ಮಳೆರಾಯ(Rain) ಆಗಮನವಾಗಿದೆ. ನಸುಕಿನ ಜಾವ ಸುಮಾರು 4.30ರಿಂದ 6.30ರ ತನಕ ಭರ್ಜರಿ ಮಳೆಯಾಗಿದೆ. ಇದರಿಂದಾಗಿ ಎಲ್ಲೆಡೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡಿವೆ. ಮೆಜೆಸ್ಟಿಕ್, ಚಾಮರಾಜನಗರ, ಎಚ್.ಎಸ್.ಆರ್ ಲೇಔಟ್, ಓಕಳಿಪುರಂ, ಕೆ.ಆರ್ ಮಾರ್ಕೆಟ್, ಸಿಕ್ಕಪೇಟೆ ಭಾಗದಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ.

ಮಲ್ಲೇಶ್ವರಂ, ಯಶವಂತಪುರ, ವಿಧಾನಸೌಧ, ಶಾಂತಿನಗರ, ಶಿವಾಜಿನಗರ, ಕಾರ್ಪೂರೇಷನ್, ಟೌನ್ ಹಾಲ್, ವಿಜಯನಗರ, ಕೆಂಗೇರಿ, ನಾಯಂಡಹಳ್ಳಿ, ಮಾಗಡಿ, ಕೆ.ಆರ್ ಪುರಂ ಸೇರಿದಂತೆ ಅನೇಕ ಕಡೆ ಮಧ್ಯರಾತ್ರಿಯಿಂದಲೇ ಮಳೆ ಕಾಣಿಸಿಕೊಂಡಿದೆ. ತಗ್ಗು ಪ್ರದೇಶಗಳಲ್ಲಿ, ಅಂರ್ ಪಾಸ್ ಗಳಲ್ಲಿ ನೀರು ನುಗ್ಗಿದ್ದು, ಎಂದಿನಂತೆ ಕಚೇರಿ, ಶಾಲಾ, ಕಾಲೇಜುಗೆ ಹೋಗುವವರಿಗೆ ತೊಂದರೆಯಾಗಿದೆ. ಇಂದು ಮಳೆ ಮುಂದುವರೆಯುವ ಸಾಧ್ಯತೆಯಿದೆ.

WhatsApp Group Join Now
Telegram Group Join Now
TAGGED:
Share This Article