Ad imageAd image

ಹಿರಿಯ ಪತ್ರಕರ್ತರ ವಸಂತ್ ನಾಡಿಗೇರ ನಿಧನ

ಹಿರಿಯ ಪತ್ರಕರ್ತ, ಸಂಯುಕ್ತ ಪತ್ರಿಕೆಯ ಸಂಪಾದಕ ವಸಂತ್ ನಾಡಿಗೇರ(59) ಅವರು ಸೋಮವಾರ ಮುಂಜಾನೆ ಹೃದಾಯಾಘಾತದಿಂದ ನಿಧನರಾಗಿದ್ದಾರೆ.

Nagesh Talawar
ಹಿರಿಯ ಪತ್ರಕರ್ತರ ವಸಂತ್ ನಾಡಿಗೇರ ನಿಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಹಿರಿಯ ಪತ್ರಕರ್ತ(Journalist), ಸಂಯುಕ್ತ ಪತ್ರಿಕೆಯ ಸಂಪಾದಕ ವಸಂತ್ ನಾಡಿಗೇರ(59) ಅವರು ಸೋಮವಾರ ಮುಂಜಾನೆ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಮೂರುವರೆ ದಶಕಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ತುಂಬಾ ವಿಶೇಷ ಹೆಡ್ಡಿಂಗ್ ಮೂಲಕವೇ ಜನಪ್ರಿಯತೆ ಗಳಿಸಿದವರು. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದವರು. ಓದಿದ್ದು ಎಂಎಸ್ಸಿ ಆದರೂ ಬದುಕು ಕಟ್ಟಿಕೊಂಡಿದ್ದು ಪತ್ರಿಕೋದ್ಯಮದಲ್ಲಿ. ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕವೇ ವೃತ್ತಿ ಪ್ರಾರಂಭಿಸಿದ್ದರು. ಕನ್ನಡ ಪ್ರಭ, ವಿಜಯ ಕರ್ನಾಟಕ, ವಿಶ್ವವಾಣಿ ಪತ್ರಿಕೆಯಲ್ಲಿಯೂ ಕೆಲಸ ಮಾಡಿದರು. ಕಳೆದ ಎರಡು ವರ್ಷಗಳ ಹಿಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಜವಾಬ್ದಾರಿ ವಹಿಸಿಕೊಂಡಿದ್ದರು. ಇವರ ನಿಧನಕ್ಕೆ ನಾಡಿನ ಹಿರಿಯ, ಕಿರಿಯ ಪತ್ರಕರ್ತರು, ಸಹದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.

WhatsApp Group Join Now
Telegram Group Join Now
Share This Article