Ad imageAd image

ವಿಜಯಪುರ: ಬಸ್ ಚಾಲಕನ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಕೆಎಸ್ಆರ್ ಟಿಸಿ ಬಸ್ ಚಾಲಕನ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಇಂಡಿಯಿಂದ ವಿಜಯಪುರ, ಜಮಖಂಡಿ, ರಾಮದುರ್ಗ ಮಾರ್ಗವಾಗಿ

Nagesh Talawar
ವಿಜಯಪುರ: ಬಸ್ ಚಾಲಕನ ಪ್ರಜ್ಞೆಯಿಂದ ತಪ್ಪಿದ ಅನಾಹುತ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಕೆಎಸ್ಆರ್ ಟಿಸಿ(KSRTC) ಬಸ್ ಚಾಲಕನ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಇಂಡಿಯಿಂದ ವಿಜಯಪುರ, ಜಮಖಂಡಿ, ರಾಮದುರ್ಗ ಮಾರ್ಗವಾಗಿ ರಾಣೇಬೆನ್ನೂರು ಹೋಗುವ ಬಸ್ಸಿನ ಬಲಗಡೆ ಚಕ್ರದ ಖಮಾನ ಪಾಟಾ ಕಟ್ ಆಗಿ ಬಿದ್ದಿದೆ. ಇದನ್ನು ಗಮನಿಸಿದ ಚಾಲಕ(Driver) ಬಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅನಾಹುತವೊಂದನ್ನು ತಪ್ಪಿಸಿದ್ದಾನೆ.

ಬಸ್ಸಿನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ. ಬಬಲೇಶ್ವರ-ಅರ್ಜುಣಗಿ ಹತ್ತಿರ ಬಸ್(Bus) ಚಲಿಸುತ್ತಿದ್ದಾಗ ಪಾಟಾ ಕಟ್ ಆಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಬಸ್ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರಿಂದ ಅನಾಹುತ ತಪ್ಪಿದೆ. ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

WhatsApp Group Join Now
Telegram Group Join Now
Share This Article