Ad imageAd image

ವಿಜಯಪುರ: ಮಹಾದೇವ ಸಾಹುಕಾರ ಆಪ್ತನ ಕೊಲೆ

Nagesh Talawar
ವಿಜಯಪುರ: ಮಹಾದೇವ ಸಾಹುಕಾರ ಆಪ್ತನ ಕೊಲೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಮಹಾದೇವ ಸಾಹುಕಾರನ ಆಪ್ತ ಭೀಮನಗೌಡ ಬಿರಾದಾರನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೂರ್ನಾಲ್ಕು ಸುತ್ತು ಗುಂಡು ಹಾರಿಸಿ, ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯ್ತಿ ಎದುರು ಬುಧವಾರ ಈ ಘಟನೆ ನಡೆದಿದೆ. ಮುಸುಕುಧಾರಿಗಳಿಂದ ಹಾಡುಹಗಲೇ ಭೀಕರ ಹತ್ಯೆ ನಡೆದಿದೆ.

ಕಟಿಂಗ್ ಶಾಪ್ ನಲ್ಲಿದ್ದ ಭೀಮನಗೌಡನ ಮೇಲೆ ದಾಳಿ ಮಾಡಲಾಗಿದೆ. ಕಣ್ಣಿಗೆ ಖಾರದಪುಡಿ ಎರಚಿ ಗುಂಡಿನ ದಾಳಿ ಮಾಡಲಾಗಿದೆ. ಅಲ್ಲದೆ ತಲ್ವಾರ್ ನಿಂದ ಹಲ್ಲೆ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹತ್ಯೆಯ ದೃಶ್ಯಗಳು ಸೆರೆಯಾಗಿದೆ. ಹಳೆಯ ವೈಷಮ್ಯದ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗನ್ ಅಲ್ಲೇ ಬೀಸಕಲಾಗಿದೆ. ಶವವನ್ನು ವಿಜಯಪುರದ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹತ್ಯೆಯಾದ ಭೀಮನಗೌಡ ಬಿರಾದಾರ ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿದ್ದ.

WhatsApp Group Join Now
Telegram Group Join Now
Share This Article