ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮಳೆ, ಗಾಳಿಯಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರು ಸಾಕಷ್ಟು ನಷ್ಟದಲ್ಲಿದ್ದು, ಬೆಲೆ ಕುಸಿತದಿಂದ ಆಕ್ರೋಶಗೊಂಡು ಈರುಳ್ಳಿಯನ್ನು ರಸ್ತೆಯಲ್ಲಿ ಚೆಲ್ಲಿ ಒದ್ದಾಡುತ್ತಿದ್ದಾರೆ. ಕ್ವಿಂಟಾಲ್ ಗೆ 200 ರೂಪಾಯಿಗೆ ಹರಾಜು ಆಗುತ್ತಿದೆ. ಇದರಿಂದ ಆಕ್ರೋಶ ರೈತ ಕೋಲ್ಹಾರ ತಾಲೂಕಿನ ಕುಪಕಡ್ಡಿ ಹತ್ತಿರ ಈರುಳ್ಳಿಯನ್ನು ರಸ್ತೆಯಲ್ಲಿ ಸುರಿದು ಕಣ್ಣೀರು ಹಾಕಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 52ರಲ್ಲಿ ತೋಟಗಾರಿಕೆಯ ಎಫ್ ಪಿಒ ಆವರಣದಲ್ಲಿ ಈರುಳ್ಳಿ ಸುರಿಯಲಿದೆ. ಬಾಗಲಕೋಟೆಯಲ್ಲಿ ಒಂದು ಸಾವಿರ ರೂಪಾಯಿ ಮಾರಾಟ ಮಾಡಲಾಗಿದೆ. ಯೂರಿಯಾ 300, ಡಿಎಪಿ ಗೊಬ್ಬರ 1200 ರೂಪಾಯಿ ಕೊಟ್ಟು ಬೆಳೆಗಳಿಗೆ ಹಾಕಿ ಕಷ್ಟಪಟ್ಟು ದುಡಿದರೂ ನಮಗೆ ಲಾಭವಿಲ್ಲ ಎಂದು ರೈತ ಮಲ್ಲಿಕಾರ್ಜುನ ಪೋಲಕೊಂಡ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.