Ad imageAd image

ಕೋವಿಡ್ ಅಕ್ರಮ ತನಿಖೆ ವರದಿ ಬಗ್ಗೆ ಸಿಎಂ ಏನಂದರು?

ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತು. ಈ ಕುರಿತು ರಚನೆ ಮಾಡಿದ ತನಿಖಾ ಆಯೋಗ ವರದಿ ನೀಡಿದೆ.

Nagesh Talawar
ಕೋವಿಡ್ ಅಕ್ರಮ ತನಿಖೆ ವರದಿ ಬಗ್ಗೆ ಸಿಎಂ ಏನಂದರು?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಕೋವಿಡ್(Covid-19) ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತು. ಈ ಕುರಿತು ರಚನೆ ಮಾಡಿದ ತನಿಖಾ ಆಯೋಗ ವರದಿ ನೀಡಿದೆ. ಇದನ್ನು ಗುರುವಾರ ನಡೆಯುವ ಸಚಿವ(Cabinet) ಸಂಪುಟಲ್ಲಿಟ್ಟು, ನಂತರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ(Media) ಮಾತನಾಡಿದ ಅವರು, ತನಿಖಾ ವರದಿಯನ್ನು ನಾನೇ ಇದುವರೆಗೂ ನೋಡಿಲ್ಲ. ವಿಪಕ್ಷಗಳಿಗೆ ವರದಿ ಕೊಟ್ಟವರು ಯಾರು? ಸುಧಾಕರಗೆ ತಾನೇನು ತಪ್ಪು ಮಾಡಿದ್ದೇನೆ ಎನ್ನುವ ಅರಿವು ಇದೆ. ಹೀಗಾಗಿ ವರದಿ ನೋಡದೆಯೇ ಟೀಕೆ ಮಾಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು ಯಾಕೆ ಎನ್ನುವ ಮೂಲಕ ಬಿಜೆಪಿ ಮಾಜಿ ಸಚಿವ ಕೆ.ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದರು.

WhatsApp Group Join Now
Telegram Group Join Now
Share This Article