Ad imageAd image

ದೇವಸ್ಥಾನದ ದುರಂತದ ಬಗ್ಗೆ ಹರಿಮುಕುಂದ ಏನಂದರು?

ಅಪಾರ ಪ್ರಮಾಣದಲ್ಲಿ ಭಕ್ತರು ಸೇರಿದ ಪರಿಣಾಮ ಕಾಲ್ತುಳಿತ ಉಂಟಾಗಿ 9 ಜನರು ಜೀವ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ...

Nagesh Talawar
ದೇವಸ್ಥಾನದ ದುರಂತದ ಬಗ್ಗೆ ಹರಿಮುಕುಂದ ಏನಂದರು?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶ್ರೀಕಾಕುಳಂ(Srikakulam): ಅಪಾರ ಪ್ರಮಾಣದಲ್ಲಿ ಭಕ್ತರು ಸೇರಿದ ಪರಿಣಾಮ ಕಾಲ್ತುಳಿತ ಉಂಟಾಗಿ 9 ಜನರು ಜೀವ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದಿದೆ. ಓರ್ವ ಬಾಲಕ, 8 ಮಹಿಳೆಯರು ಸೇರಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಈ ದೇವಸ್ಥಾನ ನಿರ್ಮಿಸಿರುವ ವ್ಯಕ್ತಿ 94 ವರ್ಷದ ಹರಿಮುಕುಂಡ ಪಾಂಡಾ ಎಂಬುವರು ಮಾತನಾಡಿದ್ದು, ಒಂದೇ ಸಲಕ್ಕೆ ಅಷ್ಟೊಂದು ಜನರು ಬಂದರೆ ನಾನು ಏನು ಮಾಡಬೇಕು ಎಂದಿದ್ದಾರೆ.

ಈ ದುರಂತದ ಹೊಣೆಯನ್ನು ತಾವು ಹೊತ್ತುಕೊಳ್ಳಲು ನಿರಾಕರಿಸಿದ್ದಾರೆ. ಎಂದಿನಂತೆ ಸಾಮಾನ್ಯವಾಗಿರುತ್ತೆ ಎಂದುಕೊಂಡಿದ್ದಾರೆ. ಆದರೆ, ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲು ಆಗಿಲ್ಲ. ಸರತಿ ಸಾಲಿನಲ್ಲಿ ಜನರಲ್ಲಿ ಕಳಿಸಲಾಗುತ್ತೆ. ಜನಸಂದಣಿ ಇತ್ತು. ಏನಾಗಿದೆ ಗೊತ್ತಿಲ್ಲ ಎನ್ನುತ್ತಿದ್ದಾರೆ.

WhatsApp Group Join Now
Telegram Group Join Now
Share This Article