Ad imageAd image

ಕರ್ನಾಟಕದ ಆಂತರಿಕ ವಿಚಾರಕ್ಕೆ ಕೇರಳ ಯಾಕೆ ಎಂಟ್ರಿ?

Nagesh Talawar
ಕರ್ನಾಟಕದ ಆಂತರಿಕ ವಿಚಾರಕ್ಕೆ ಕೇರಳ ಯಾಕೆ ಎಂಟ್ರಿ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಿಲಿಕಾನ್ ಸಿಟಿಯ ಕೋಗಿಲು ಲೇಔಟ್ ನಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಮನೆಗಳನ್ನು ಗ್ರೇಟರ್ ಬೆಂಗಳೂರು ತೆರವುಗೊಳಿಸಿದೆ. ಇದು ಕರ್ನಾಟಕದ ಆಂತರಿಕ ವಿಚಾರ. ಈ ಬಗ್ಗೆ ಕೇರಳದ ಸಂಸದರು, ಶಾಸಕರು, ಮಾಜಿ ಸಚಿವರು ಎಂಟ್ರಿ ಯಾಕೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಬಂದು ಧರ್ಮ ರಾಜಕಾರಣ ಮಾಡುವುದು ಯಾಕೆ ಅಂತಾ ಕಿಡಿ ಕಾರುತ್ತಿದ್ದಾರೆ.

ಕೇರಳ ಸಂಸದ ಎ.ಎ ರಹೀಂ, ಶಾಸಕ ಕೆ.ಟಿ ಜಲೀಲ್, ಕರ್ನಾಟಕದ ಜೆಡಿಎಸ್ ನಾಯಕ ಸಿ.ಎಂ ಇಬ್ರಾಹಿಂ ಸೇರಿದಂತೆ ಇತರರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇಲ್ಲಿನ ಅಕ್ರಮ ನಿವಾಸಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಹೈಕಮಾಂಡ್ ಮೂಲಕ ಕರ್ನಾಟಕ ಸರ್ಕಾರದ ಮೂಲಕ ಒತ್ತಡ ಹೇರಲಾಗುತ್ತಿದೆ. ಈ ಮೂಲಕ ಕೇರಳ ರಾಜಕೀಯವನ್ನು ಇಲ್ಲಿ ನಡೆಸಲಾಗುತ್ತಿದೆ ಎಂದು ಕಿಡಿ ಕಾರಲಾಗುತ್ತಿದೆ.

ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಇಂತಹ ವಿಚಾರದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಸಂತ್ರಸ್ಥರಿಗೆ ಪುನರ್ ವಸತಿ ಕಲ್ಪಿಸಿಕೊಡುತ್ತೇವೆ ಅನ್ನೋ ಭರವಸೆಯನ್ನು ನೀಡಿದ್ದು, ಇದು ರಾಜ್ಯ ಕಾಂಗ್ರೆಸ್ ಒಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಧರ್ಮ, ಜಾತಿಯ ಕಾರಣಕ್ಕೆ ಇಲ್ಲಿ ಬಂದು ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ಅಷ್ಟೊಂದು ಕಾಳಜಿ ಇದ್ದರೆ ಕೇರಳದಲ್ಲಿ ವ್ಯವಸ್ಥೆ ಮಾಡಿ ಎಂದು ಕರ್ನಾಟಕದ ಜನತೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article