Ad imageAd image

ಬೈಕ್ ಅಪಘಾತದಲ್ಲಿ ಯುವತಿ ಸಾವು

ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನರೇಗಾ ಇಂಜಿನಿಯರ್ ಶರಣ್ಯಗೌಡ(25) ಎನ್ನುವ ಯುವತಿ ಮೃತಪಟ್ಟಿದ್ದಾಳೆ.

Nagesh Talawar
ಬೈಕ್ ಅಪಘಾತದಲ್ಲಿ ಯುವತಿ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandaya): ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನರೇಗಾ ಇಂಜಿನಿಯರ್ ಶರಣ್ಯಗೌಡ(25) ಎನ್ನುವ ಯುವತಿ ಮೃತಪಟ್ಟಿದ್ದಾಳೆ. ಮಳವಳ್ಳಿ ತಾಲೂಕಿನ ಬಸಾಪುರ ಗೇಟ್ ಹತ್ತಿರ ಅಪಘಾತ ನಡೆದಿದೆ. ಕನಕಪುರ ತಾಲೂಕಿನ ಸಾತನೂರು ಪಂಚಾಯ್ತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸ್ವಗ್ರಾಮ ಬಳೆಹೊನ್ನಿಗದಿಂದ ಹಲಗೂರಿಗೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ.

ಮದುವೆ ಆಗಬೇಕಿದ್ದವಳು ಮಸಣ ಸೇರಿದಳು: ದುರಂತ ಏನಪ್ಪ ಅಂದರೆ ಶರಣ್ಯಗೌಡಳ ಮದುವೆ ಫೆಬ್ರವರಿ 16ರಂದು ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿದ್ದವು. ದಾಂಪತ್ಯ ಜೀವನಕ್ಕೆ ಕಾಲಿಡಬೇಕಾದ ಯುವತಿ ಅಪಘಾತದಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿಕೊಂಡಿದೆ. ಹಲಗೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article